• Slide
    Slide
    Slide
    previous arrow
    next arrow
  • ಆಹಾರವನ್ನರಸಿ ಬಂದಿದ್ದ ಜಿಂಕೆ ರಕ್ಷಣೆ

    300x250 AD

    ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ಆಹಾರವನ್ನರಸಿ ಬಂದಿದ್ದ ಜಿಂಕೆಯೊAದನ್ನು ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಅಲ್ಲೆ ಇರುವ ಸೈಯದ್ ಕಮ್ಯೂನಿಟಿ ಸಭಾಭವನದ ಸಿಬ್ಬಂದಿಗಳು ಸೇರಿ ಬೀದಿ ನಾಯಿಗಳನ್ನು ಓಡಿಸಿ, ಬೀದಿ ನಾಯಿಗಳ ದಾಳಿಗೊಳಗಾದ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಾನವೀಯ ಘಟನೆ ನಡೆದಿದೆ.

    ಹಳೆದಾಂಡೇಲಿಯಲ್ಲಿ ಆಹಾರವನ್ನರಸಿ ಬಂದಿದ್ದ ಜಿಂಕೆಯನ್ನು ಬೀದಿನಾಯಿಗಳು ಬೆನ್ನಟ್ಟಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದವು. ಈ ಸಮಯದಲ್ಲಿ ಸ್ಥಳೀಯರು ಮತ್ತು ಸೈಯದ್ ಸಭಾಭವನದ ಸಿಬ್ಬಂದಿಗಳು ಸೇರಿ ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಿಸಿ, ಸೈಯದ್ ಸಭಾಭವನದಲ್ಲಿ ಇರಿಸಿ, ಉಪಚರಿಸಿ, ಗಾಯಗೊಂಡ ಕಡೆ ಅರಸಿನ ಪುಡಿ ಹಚ್ಚಿ, ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣವೆ ಸ್ಥಳಕ್ಕಾಗಮಿಸಿದ ಉಪ ವಲಯಾರಣ್ಯಾಧಿಕಾರಿ ಸಂದೀಪ್ ನಾಯ್ಕ ನೇತೃತ್ವದ ತಂಡ ಜಿಂಕೆಯನ್ನು ವಶಕ್ಕೆ ಪಡೆದು, ಪಶುವೈದ್ಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಯನ್ನು ನೀಡಿ, ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top