Slide
Slide
Slide
previous arrow
next arrow

ಜೂ.11ಕ್ಕೆ ರೇವಣಕಟ್ಟಾದಲ್ಲಿ ‘ಗುರು ವಂದನೆ’

300x250 AD

ಶಿರಸಿ: ಇಲ್ಲಿಗೆ ಸಮೀಪದ ರೇವಣಕಟ್ಟಾದ ಶ್ರೀ ಸಿದ್ದಿ ವಿನಾಯಕ ದೇವಾಲಯದಲ್ಲಿ ಗುರು ವಂದನಾ ಹಾಗೂ ಸಂಗೀತ ಕಾರ್ಯಕ್ರಮ ಜ.11ರಂದು ಮಧ್ಯಾಹ್ನ 3.30ರಿಂದ ನಡೆಯಲಿದೆ.

ಅಂದು ಹಿರಿಯ ಸಂಗೀತ ಕಲಾವಿದ ಗಂಗಾಧರ ಹೆಗಡೆ ಬೊಪ್ಪನಕೊಡ್ಲು ಅವರಿಗೆ ಗುರು ವಂದನೆ, ಗೌರವ ಸಮರ್ಪಣೆ, ಸಮ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿಶ್ವನಾಥ ಹೆಗಡೆ ಸೋಮನಮನೆ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ವಸಂತ ಟಿ. ಹೆಗಡೆ ಸಿರಿಕುಳಿ ವಹಿಸಲಿದ್ದು, ಅತಿಥಿಗಳಾಗಿ ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್.ಭಾಗ್ವತ್ ತ್ಯಾರಗಲ್ ಭಾಗವಹಿಸುವರು. ಹಿರಿಯ ಸಂಗೀತ ಕಲಾವಿದ ವಿಶ್ವನಾಥ ಹೆಗಡೆ ಸೋಮನಮನೆ ಉಪಸ್ಥಿತರಿರುವರು.

300x250 AD

ಪಂಡಿತ್ ಶ್ರೀಪಾದ ಹೆಗಡೆ ಸೋಮನಮನೆ ಹಾಗೂ ವಿನಯ ಹೆಗಡೆ ತೋಟದಹಳ್ಳಿ ಅವರಿಂದ ಗಾಯನ ನಡೆಯಲಿದ್ದು, ಸಾಥಿಯಲ್ಲಿ ಮಹೇಶ ಹೆಗಡೆ ಹೊಸಗದ್ದೆ, ಅಕ್ಷಯ ಭಟ್ಟ‌ ಹಂಸಳ್ಳಿ, ಗುರುಪ್ರಸಾದ ಹೆಗಡೆ ಗಿಳಿಗುಂಡಿ, ಭರತ್ ಹೆಗಡೆ ಹೆಬ್ಬಲಸು ಪಾಲ್ಗೊಳ್ಳುವರು. ಸ್ಥಳೀಯ ಕಲಾಭಿಮಾನಿಗಳು, ರೇವಣಕಟ್ಟಾ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಆಡಳಿತ ಸಮಿತಿ ಸಹಕಾರವಿದೆ ಎಂದು‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top