• Slide
    Slide
    Slide
    previous arrow
    next arrow
  • ಹೀರೆಕೈ ರಾಮೇಶ್ವರ ದೇವರ ಪ್ರತಿಷ್ಠಾಪನೆ ಸಂಪನ್ನ

    300x250 AD

    ಸಿದ್ದಾಪುರ: ತಾಲೂಕಿನ ಹಿರೇಕೈ( ಹಾಲ್ಕಣಿ) ಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ರಾಮೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಸಮರ್ಪಣೆ ಕಾರ್ಯಕ್ರಮವು ಜೂನ್ 1 ಹಾಗೂ 2ರಂದು ವಿಜೃಂಭಣೆಯಿಂದ ನಡೆಯಿತು.

    ವಿದ್ವಾನ್ ವಿನಾಯಕ ಭಟ್ ಮತ್ತಿಹಳ್ಳಿ ಹಾಗೂ ವಿದ್ವಾನ್ ಕುಮಾರ ಭಟ್ ಕೊಳಗೀಬಿಸ್ ಅವರ ಆಚಾರ್ಯತ್ವದಲ್ಲಿ ಕಾರ್ಯಕ್ರಮಗಳು ನಡೆದವು.
    ಜೂನ್ 1ಗುರುವಾರ ದಂದು ಗಣಪತಿ ಪೂಜೆ, ದೇವನಾಂದಿ, ಮಹಾಸಂಕಲ್ಪ , ಕಲಶ ಸ್ಥಾಪನೆ ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಹಾಗೂ
    ಜೂ. 2ರಂದು ಮುಂಜಾನೆ 6.30ಕ್ಕೆ ವೃಷಭ ಲಗ್ನದ ಶುಭಮೂಹೂರ್ತದಲ್ಲಿ ರಾಮೇಶ್ವರ ದೇವರ ಪ್ರತಿಷ್ಠಾಪನೆ, ಮಹಾ ಕಲಶ ಸ್ಥಾಪನೆ,ಕುಂಭಾಭಿಷೇಕ, ಮಹಾಪೂಜೆ ನಡೆಯಿತು.ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
    ಸಂಜೆ 5ಗಂಟೆಯಿಂದ ಸೇವಾರತ್ನ ಮಾಹಿತಿ ಕೇಂದ್ರ ಕಾನಸೂರು ಇವರಿಂದ ದಕ್ಷ ಯಜ್ಞ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
    ಸಹಸ್ರಾರು ಭಕ್ತರು ಕಾರ್ಯಕ್ರಮ ಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top