Slide
Slide
Slide
previous arrow
next arrow

ದೇಶಪಾಂಡೆ ಗೆಲುವು: ಉಳವಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹರಕೆ ತೀರಿಸಿದ ಮಂಜುನಾಥ

300x250 AD

ಜೊಯಿಡಾ: ವಿಧಾನಸಭಾ ಚುನಾವಣೆಯಲ್ಲಿ 9ನೇ ಬಾರಿ ಆರ್.ವಿ. ದೇಶಪಾಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದು, ಅವರ ಅಭಿಮಾನಿ ಉಳವಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ ಮೋಕಾಶಿ ಉಳವಿಯಿಂದ ಬರಿಗಾಲಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಆರ್.ವಿ.ದೇಶಪಾಂಡೆ ಅವರು ಮತ್ತೆ ನಮ್ಮ ಭಾಗದ ಶಾಸಕರಾಗಬೇಕು, ಅಧಿಕಾರಕ್ಕೆ ಬರಬೇಕು. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಉಳವಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕಾಲ್ನಡಿಯಲ್ಲಿ ಹೋಗಿ ಪೂಜೆ ಸಲ್ಲಿಸುತ್ತೇನೆ ಎಂದು ಮಂಜುನಾಥ ಮೋಕಾಶಿ ದೇವರಲ್ಲಿ ಬೇಡಿಕೊಂಡಿದ್ದರು. ಅದರಂತೆಯೇ ಆರ್.ವಿ. ದೇಶಪಾಂಡೆ ಅವರು ಮತ್ತೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದ ತಕ್ಷಣವೇ 10 ದಿನಗಳ ಕಾಲ ಕಾಲ್ನಡಿಗಯಲ್ಲಿ ಧರ್ಮಸ್ಥಳಕ್ಕೆ ಸಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ನೆಚ್ಚಿನ ನಾಯಕನ ಗೆಲುವಿಗೆ ಸಂತಸ ವ್ಯಕ್ತಪಡಿಸಿ ಮಂಜುನಾಥ ಮೋಕಾಶಿ ಹರಕೆ ತಿರಿಸಿದರು.

300x250 AD
Share This
300x250 AD
300x250 AD
300x250 AD
Back to top