• Slide
    Slide
    Slide
    previous arrow
    next arrow
  • ದಾಂಡೇಲಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಮನವಿ

    300x250 AD

    ದಾಂಡೇಲಿ: ನಗರದಲ್ಲಿ ಕೆಲವೊಂದು ಬಹುಮುಖ್ಯ ಸಮಸ್ಯೆಗಳಿದ್ದು, ಆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕ ಫಿರೋಜ್ ಫಿರ್ಜಾದೆ ಮನವಿ ಮಾಡಿದ್ದಾರೆ.

    ಬಹುಮುಖ್ಯವಾಗಿ ಬೆಳೆಯುತ್ತಿರುವ ದಾಂಡೇಲಿಗೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಸ್ಥಗಿತಗೊಂಡಿರುವ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಪುನರಾರಂಭಿಸಬೇಕು. ನಗರದಲ್ಲಿ ನಗರ ಸಭೆಯ ಅಧೀನದಲ್ಲಿರುವ ಸಾವಿರಾರು ಮನೆಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಅವರವರ ಹೆಸರಿನ ಮಾಲೀಕತ್ವಕ್ಕೆ ಮಾಡಿಕೊಡಬೇಕು. ಮುಚ್ಚಲ್ಪಟ್ಟ ಐಪಿಎಂ ಮತ್ತು ಡಿ.ಎಫ್.ಎ ಕಾರ್ಖಾನೆ ಪ್ರದೇಶದಲ್ಲಿ ರ‍್ಯಾಯ ಕಾರ್ಖಾನೆ ನಿರ್ಮಾಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top