Slide
Slide
Slide
previous arrow
next arrow

ಬೆಂಕಿ ಅವಘಡ: ಲಕ್ಷಾಂತರ ರೂ. ಹಾನಿ

300x250 AD

ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಗಿನಸಸಿಯಲ್ಲಿ ವಿದ್ಯುತ್ ಶಾರ್ಟ್ ನಿಂದ ವಾಸ್ತವ್ಯದ ಮನೆಗೆ ತಾಗಿಕೊಂಡಿದ್ದ ಕೊಟ್ಟಿಗೆ ಒಳಗೊಂಡಿದ್ದ ಬಚ್ಚಲುಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅನಾಹುತ ಸಂಭವಿಸಿ,ಸುಮಾರು 5 ಲಕ್ಷ ರೂ. ವಸ್ತುಗಳು ಭಸ್ಮವಾಗಿದೆ.

ಪರಮೇಶ್ವರ್ ಗಣಪತಿ ನಾಯ್ಕ್ ಕೆಳಗಿನಸಸಿ ಎನ್ನುವವರಿಗೆ ಸೇರಿದ ಮನೆಯಾಗಿದ್ದು ಬೆಂಕಿಯಿಂದಾಗಿ ಪಕಾಸು, ರೀಪು, ಹಂಚು, 30 ಚೀಲ ಸಿಪ್ಪೆ ಚಾಲಿ ಸಂಪೂರ್ಣವಾಗಿ ಸುಟ್ಟು ಹೋಗಿವೆ. ವಿಷಯ ತಿಳಿದ ತಕ್ಷಣ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, 112 ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ ಎಂದು ಹೇಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top