Slide
Slide
Slide
previous arrow
next arrow

ಆಯತಪ್ಪಿ ಬಿದ್ದು ಕಟ್ಟಡ ಕಾರ್ಮಿಕ ಸಾವು

300x250 AD

ಅಂಕೋಲಾ: ದೇವಾಲಯದ ಆವರಣದಲ್ಲಿ ಆಯತಪ್ಪಿ ಬಿದ್ದು ಕಟ್ಟಡ ಕಾರ್ಮಿಕ ಮೃತಪಟ್ಟ ಘಟನೆ ತಾಲೂಕಿನ ವಂದಿಗೆಯಲ್ಲಿ ಸಂಭವಿಸಿದೆ.
ಬೊಬ್ರವಾಡ ನಿವಾಸಿ ಉಮೇಶ ಗಾಂವಕರ್ (40) ಮೃತ ವ್ಯಕ್ತಿ. ಕಟ್ಟಡ ಕಾರ್ಮಿಕನಾದ ಈತ ವಿಪರೀತ ಸರಾಯಿ ಕುಡಿದಿದ್ದು ತಾನು ಕೆಲವು ದಿನಗಳ ಹಿಂದೆ ದೇವಸ್ಥಾನದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತೆಗೆದಿಟ್ಟ ಬಟ್ಟೆ ತರುವುದಾಗಿ ಹೇಳಿ ಹೊರಟವನು ದೇವಸ್ಥಾನದ ಮುಂಭಾಗದ ಆವರಣದಲ್ಲಿ ನೆಲಕ್ಕೆ ಅಳವಡಿಸಿರುವ ಇಂಟರ್ ಲಾಕ್ ಮೇಲೆ ಆಯ ತಪ್ಪಿ ಬಿದ್ದಿರುವುದಾಗಿ ತಿಳಿದು ಬಂದಿದೆ.

ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಪೆಟ್ಟು ಮಾಡಿಕೊಂಡವನಿಗೆ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್ನಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಭಟ್ಕಳ ಸಮೀಪ ಉಸಿರಾಟ ನಿಂತ ಕಾರಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ವೈದ್ಯಾಧಿಕಾರಿಗಳಿಂದ ಪರೀಕ್ಷೆ ನಡೆಸಿದ್ದು, ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top