• Slide
    Slide
    Slide
    previous arrow
    next arrow
  • ಅಂಕೋಲಾದಲ್ಲಿ ಮೋದಿ ಮೋಡಿ; 40 ವರ್ಷದ ನಂತರ ಜಿಲ್ಲೆಗೆ ಪ್ರಧಾನಿ

    300x250 AD

    ಅಂಕೋಲಾ: 40 ವರ್ಷಗಳ ನಂತರ ದೇಶದ ಪ್ರಧಾನಿಯೋರ್ವರು ಜಿಲ್ಲೆಗೆ ಆಗಮಿಸಿದ್ದು, ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಜಿಲ್ಲೆಯ ಜನರನ್ನುದ್ದೇಶಿಸಿ ಮಾತನಾಡಿದರು.

    ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಗೆ ದೇಶ, ಜನರ ಹಿತ ಮೊದಲು. ಆದರೆ ಕಾಂಗ್ರೇಸಿಗೆ ಭ್ರಷ್ಟಾಚಾರವೇ ಆದ್ಯತೆ. ಒಂದು ಕುಟುಂಬರ ಪರವಾಗಿ ಮಾತ್ರ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಕಾಂಗ್ರೆಸಿನದ್ದು ಬಯ್ಯುವ ಸಂಸ್ಕೃತಿ. ಹಾಗಾಗಿಯೇ ಕಾಂಗ್ರೆಸ್ ನಾಯಕರು ಮೋದಿಯನ್ನು ತೀವ್ರವಾಗಿ ಬಯ್ಯುತ್ತಿದ್ದಾರೆ. ಇದಕ್ಕೆಲ್ಲಾ ಈ ಬಾರಿ ಕರ್ನಾಟಕದ ಮತದಾರ ಉತ್ತರ ನೀಡಬೇಕಿದೆ ಎಂದರು.

    ಕರಾವಳಿಯ ಮೀನುಗಾರಿಕೆಯ ಅಭಿವೃದ್ಧಿಗೆ ಬಿಜೆಪಿ ಸರಕಾರ ಕಟಿಬದ್ಧವಾಗಿದೆ. ಜಿಲ್ಲೆಯಲ್ಲಿ ಮತ್ಸ್ಯಸಂಪದ ಯೋಜನೆ, ಸಾಗರ ಮಾಲಾ ಯೋಜನೆಗಳ ಮೂಲಕ ಕರಾವಳಿಯ ಅಭಿವೃದ್ಧಿ ನಡೆದಿದೆ. ಶಿರಸಿ ಸುಪಾರಿಗೆ ಜಿಐ ಟ್ಯಾಗ್ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಜಿಲ್ಲೆಯ ಹಾಲಕ್ಕಿ ಸಂಸ್ಕೃತಿಯ ಸಾಧಕರನ್ನು ಗುರುತಿಸಿ ಪದ್ಮ ಪುರಸ್ಕಾರ ನೀಡಿದ್ದು ಬಿಜೆಪಿ ಸರಕಾರ ಎಂದು ಅವರು ಹೇಳಿದರು.

    300x250 AD

    ಕಾರ್ಯಕ್ರಮದಲ್ಲಿ ಶಾಸಕರುಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ್, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ಹಳಿಯಾಳ ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ, ವಿ.ಪ‌.ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top