• Slide
    Slide
    Slide
    previous arrow
    next arrow
  • ಗಂಗಾವಳಿಯಲ್ಲಿ ಅಕ್ರಮ ಗಣಿಗಾರಿಕೆ

    300x250 AD

    ಕುಮಟಾ: ಗಂಗಾವಳಿ ನದಿಯುದ್ದಕ್ಕೂ ಅಕ್ರಮ ಮರಳುಗಾಳಿಕೆ ನಡೆಯುತ್ತಿದ್ದು, ಚುನಾವಣೆಯ ಬಿಗಿ ವಾತಾವರಣವಿದ್ದರೂ ಕೂಡ ರಾಜಾರೋಶವಾಗಿ ಸಾಗಾಟ ಮಾಡುತ್ತಿರುವದನ್ನು ನೋಡಿದರೆ ಸಂಬoಧಪಟ್ಟ ಎಲ್ಲ ಅಧಿಕಾರಿಗಳ ಶಾಮೀಲಾತಿ ಎದ್ದು ಕಾಣುತ್ತಿದೆ.

    ಕೆಲವು ಇಲಾಖೆಯವರು ಕೂಡ ಶಾಮೀಲಾಗಿರುವುದರಿಂದಲೇ ಇಂತಹ ಅಕ್ರಮ ಮರಳು ದಂಧೆ ಸಕ್ರಮದಂತೆ ನಡೆಯುತ್ತಿದೆ ಎಂದು ನದಿಯಂಚಿನ ಜನರು ಕಣ್ಣೀರು ಹಾಕುತ್ತಿದ್ದಾರೆ. ಈ ಮರಳು ನದಿಯಿಂದ ತೆಗೆಯುವುದರಿಂದ ಚಿಪ್ಪೆಕಲ್ಲು, ಕಲ್ಗ ಸಂತತಿ ನಾಶವಾಗುತ್ತಿದೆ. ಪ್ರತಿದಿನ ನೂರಾರು ವಾಹನಗಳಲ್ಲಿ ಸಾಗಾಟ ಮಾಡುವ ವ್ಯವಸ್ಥಿತ ಸಂಘಟನೆಯಿದ್ದು, ಕೆಲವು ಭಾಗಗಳನ್ನು ಅವರವರು ಹಂಚಿಕೊoಡಿದ್ದಾರೆ. ಯಾರೇ ಅಧಿಕಾರಿಗಳು ಬಂದರೂ ಇವರೆಲ್ಲರೂ ಒಟ್ಟಾಗಿ ಅವರೊಂದಿಗೆ ಕುಳಿತು ವ್ಯವಹಾರ ನಡೆಸುತ್ತಾರೆ. ಹೀಗಾಗಿ ಇವರಿಗೆ ಯಾರದೇ ಭಯ ಇಲ್ಲದಂತಾಗಿದೆ.

    300x250 AD

    ಚುನಾವಣೆಯ ಸಂದರ್ಭದಲ್ಲಿಯಾದರೂ ಈ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಬೀಳಬಹುದು ಎಂದು ಜನರು ಅಂದುಕೊoಡಿದ್ದರು. ಆದರೆ ಇವರಿಗೆ ಯಾರೇ ಬಂದರೂ ಕೂಡ ಮೂಲಾಜಿಲ್ಲದೇ ತಮ್ಮ ದಂಧೆಯನ್ನು ಮುಂದುವರೆಸಿಕೊoಡು ಹೋಗಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದು ಅವರಿಗೆ ಉತ್ತಮ ಬೆಳವಣಿಗೆಯೂ ಆಗಿದೆ.
    ಗಂಗಾವಳಿ ನದಿಯಲ್ಲಿ ಸಮುದ್ರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಕೆಲವು ಸೂಕ್ಷ್ಮ ಮೀನುಗಳು ಕೂಡ ಇಲ್ಲಿ ವಾಸ ಮಾಡುತ್ತವೆ. ಹಾಗೇ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ ಮರಳು ಗಣಿಗಾರಿಕೆ ಇವೆಲ್ಲವನ್ನು ನುಂಗಿ ಹಾಕುತ್ತಿದೆ. ಅಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ಕೆಲವರು ಅಧಿಕಾರಿಗಳ ಬಳಿ ದೂರಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top