Slide
Slide
Slide
previous arrow
next arrow

ಮತ್ತೀಘಟ್ಟದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಪ್ರಮೋದ ವೈದ್ಯ ಆಗ್ರಹ

300x250 AD

ಶಿರಸಿ: ತಾಲೂಕಿನ ಮತ್ತಿಘಟ್ಟ ಪ್ರದೇಶದಲ್ಲಿ ಬಿಎಸ್ಎನ್ಎಲ್ ಟವರ್ ಒಂದೇ ನೆಟ್ವರ್ಕ್ ಸಾಧನವಾಗಿದ್ದು, ಕಳೆದ ಕೆಲ ದಿನಗಳಿಂದ ವಿದ್ಯುತ್ ಇಲ್ಲದೇ ಟವರ್ ಕೂಡ ಕೆಲಸ ಮಾಡುತ್ತಿಲ್ಲ. ಹಾಗಾಗಿ ಮತ್ತಿಘಟ್ಟದ ಟವರ್ ಗೆ ಸೋಲಾರ್ ಪ್ಲೇಟ್ ಅಳವಡಿಸಿ ಸಮಸ್ಯೆ ಬಗೆಹರಿಸುವಂತೆ ಯುವ ಮುಖಂಡ ಪ್ರಮೋದ ಗೋಪಾಲಕೃಷ್ಣ ವೈದ್ಯ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಮತ್ತಿಘಟ್ಟದ ಜಲಪಾತದಲ್ಲಿ ನಾಪತ್ತೆಯಾದ ಯುವಕನನ್ನು ಊರಿನವರರೆಲ್ಲ ಸೇರಿ ಹುಡುಕಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಇದಕ್ಕೆ ನೆಟ್ವರ್ಕ್ ಸಮಸ್ಯೆಯೇ ಪ್ರಮುಖ ಕಾರಣ. ಇಲ್ಲಿ ಪ್ರವಾಸೋದ್ಯಮದ ಅಡಿಯಲ್ಲಿ ಟವರ್ ನಿರ್ಮಾಣವಾಗಿತ್ತು. ದಟ್ಟ ಅರಣ್ಯದ ಮಧ್ಯೆ ಬಂದಂತಹ ವಿದ್ಯುತ್ ತಂತಿಗಳು ಮೂಲಕ ಸಂಪರ್ಕ ಜೋಡಿಸಲಾಗಿದೆ. ಜೋರಾದ ಗಾಳಿ-ಮಳೆಗೆ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಟವರ್ ಗೆ ಜನರೇಟರ್ ಅಳವಡಿಸಿದರೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷ ಬಿಎಸ್ಎನ್ಎಲ್ ಅವರೋ ಅಥವಾ ಅವರ ಕಾಂಟ್ರಾಕ್ಟರ ಗೊತ್ತಿಲ್ಲ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸುವುದಾಗಿ ಹೇಳಿದ್ದರು. ನಂತರ ಯಾವ ಕಾರಣಕ್ಕೆ ಅಂತ ಗೊತ್ತಿಲ್ಲ ಮತ್ತೆ ಪುನಃ ಸೋಲಾರ್ ಪ್ಯಾನೆಲ್ ಅಳವಡಿಸಲು ಸಾಧ್ಯವಿಲ್ಲವೆಂದು ವಾಪಸ್ ತೆಗೆದುಕೊಂಡ ಹೋಗಿದ್ದಾರೆ. ಊರವರೆಲ್ಲ ಸೇರಿ ಬಿಎಸ್ಎನ್ಎಲ್ ಜಿಟಿಯೋ ಅವರಿಗೆ ಒಂದು ಮನವಿ ಕೂಡ ನೀಡಲಾಗಿತ್ತು. ಈಗ ನಮ್ಮ ಊರಿನ ಟವರ್ ಗೆ ಸೋಲಾರ್ ಪ್ಯಾನೆಲ್ ಅಳವಡಿಸಬೇಕು. ಬ್ಯಾಕಪ್ ಆಗಿ ಬೇಲಿದ್ದರೆ ಜನರೇಟರ್ ಮೂಲಕ ವ್ಯವಸ್ಥೆ ಮಾಡಲಿ. ತೀವ್ರ ಗುಡ್ಡಗಾಡಿನ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯನ್ನು ಆಡಳಿತ ನಡೆಸುವವರು ಈ ಕೂಡಲೇ ಗಮನಿಸಿ, ತುರ್ತು ಸಮಸ್ಯೆ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top