Slide
Slide
Slide
previous arrow
next arrow

ಮೇ 6ರಿಂದ ಮಹಿಷಾಸುರ ಮರ್ಧಿನಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

300x250 AD

ಸಿದ್ದಾಪುರ: ಶ್ರೀಕ್ಷೇತ್ರ ಕೋಡಿಗದ್ದೆಯ ಶ್ರೀಮಹಿಷಾಸುರಮರ್ದಿನಿ ದೇವಿಯ ನವೀಕೃತ ದಿವ್ಯ ಮಂಗಳೆಯ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಮೇ 6ರಿಂದ 9ರವರೆಗೆ ಜರುಗಲಿದೆ ಎಂದು ಶ್ರೀಶೃಂಗೇರಿ ಶಂಕರಮಠದ ಧರ್ಮಾಧಿಕಾರಿ, ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಜಯ ಹೆಗಡೆ ದೊಡ್ಮನೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಶಂಭುಲಿ0ಗೇಶ್ವರ ಮಹಿಷಾಸುರಮರ್ದಿನಿ ದೇವಾಲಯವಿರುವ ಶ್ರೀಕ್ಷೇತ್ರ ಕೋಡಿಗದ್ದೆ ಅತ್ಯಂತ ಪ್ರಾಚೀನ ಮತ್ತು ಪುಣ್ಯಕ್ಷೇತ್ರ. ನೂತನ ವಿಗ್ರಹದ ಪ್ರತಿಷ್ಠಾಪನೆ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ.ಕಟ್ಟೆ ಶಂಕರ ಭಟ್ಟ ಅವರ ನೇತೃತ್ವದಲ್ಲಿ ಸ್ಥಳೀಯ ವೈದಿಕರ ನೆರವಿನೊಂದಿಗೆ 4 ದಿನಗಳ ಕಾಲ ನಡೆಯಲಿದ್ದು ಚಂಡಿಕಾಯಾಗದೊ0ದಿಗೆ ಸಂಪನ್ನಗೊಳ್ಳಲಿದೆ ಎಂದರು.
ಸಮಿತಿಯ ಅಧ್ಯಕ್ಷ ಶ್ರೀಧರ ಭಟ್ಟ ಗಡಿಹಿತ್ಲು ಈ ಅಪೂರ್ವ ಕಾರ್ಯಕ್ರಮಕ್ಕೆ ಭಕ್ತಾದಿಗಳು ತನು- ಮನ, ಧನದ ಸರ್ವ ವಿಧ ಸೇವೆ ಸಲ್ಲಿಸುವುದರ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು. ಸಮಿತಿಯ ಪದಾಧಿಕಾರಿಗಳಾದ ಶಾಂತಕುಮಾರ ಭಟ್ಟ ದೊಡ್ಮನೆ, ಅಣ್ಣಪ್ಪ ನಾಯ್ಕ ಕೋಡಿಗದ್ದೆ, ಶ್ರೀಧರ ಗುರ್ಕೋಡು, ಆರ್.ಎಸ್.ಭಟ್ಟ ಕಲ್ಲಾಳ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top