• Slide
    Slide
    Slide
    previous arrow
    next arrow
  • ನೌಕಾನೆಲೆ ವ್ಯಾಪ್ತಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ ಪ್ರತಿಭಟನೆ ಖಂಡಿತ: ಬಿ.ಕೆ.ಹರಿಪ್ರಸಾದ

    300x250 AD

    ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅಂಕೋಲಾ ತಾಲೂಕಿನ ನೌಕಾನೆಲೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದು, ರಕ್ಷಣಾ ಇಲಾಖೆ ಜಾಗದಲ್ಲಿ ಮೋದಿ ಕಾರ್ಯಕ್ರಮ ಮಾಡಿದರೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ರಕ್ಷಣಾ ಇಲಾಖೆ ಜಾಗದಲ್ಲಿ ಮೋದಿ ಭಾಷಣ ಮಾಡಲು ಅವಕಾಶ ಕೊಡುತ್ತಿದ್ದಾರೆ ಎನ್ನಲಾಗಿದೆ. ಯಾವತ್ತೂ ಸಹ ರಕ್ಷಣಾ ಇಲಾಖೆಯನ್ನು ಚುನಾವಣೆಗೆ ದುರುಪಯೋಗ ಮಾಡಿಸಿಕೊಂಡ ನಿರ್ದೇಶನ ಇಲ್ಲ. ಅದಕ್ಕೆ ಪ್ರತಿರೋಧ ಮಾಡಲಾಗುವುದು ಎಂದಿದ್ದಾರೆ.

    300x250 AD

    ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು. ಅಲ್ಲದೇ ನ್ಯಾಯಾಲಯದ ಮೆಟ್ಟಿಲನ್ನು ಏರಲು ತಯಾರಿ ಮಾಡಿಕೊಳ್ಳುತ್ತೇವೆ. ಒಂದೊಮ್ಮೆ ಅವಕಾಶ ಕೊಟ್ಟಿದ್ದೇ ಆದರೆ ನಂತರ ನಮ್ಮ ನಿಲುವು ತಿಳಿಸಲಾಗುವುದು. ದೇಶದ ಗಡಿಭಾಗದಲ್ಲಿನ ಸೈನಿಕರನ್ನು ಕಾಪಾಡಲು ಆಗುತ್ತಿಲ್ಲ. ಇಂತಹದರ ನಡುವೆ ಸೂಕ್ಷ್ಮ ಪ್ರದೇಶದ ಜಾಗದಲ್ಲಿ ರಾಜಕೀಯ ಕಾರ್ಯಕ್ರಮ ಮಾಡುವುದು ತಪ್ಪು. ಇದನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top