Slide
Slide
Slide
previous arrow
next arrow

ಕಾರು- ಲಾರಿ ಅಪಘಾತ; ಪ್ರಯಾಣಿಕರಿಗೆ ಗಾಯ

300x250 AD

ಅಂಕೋಲಾ: ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾದ ಘಟನೆ ತಾಲೂಕಿನ ಶಿರೂರು ರಾ.ಹೆ 66ರಲ್ಲಿ ನಡೆದಿದೆ.

ಕಾರವಾರ ತಾಲೂಕಿನ ಅಮದಳ್ಳಿ ಕಂತ್ರಿವಾಡಾ ನಿವಾಸಿಗಳಾದ ದಿನೇಶ ಅಶೋಕ ಕಂತ್ರಿಕರ(34), ನವೀನ ಅನಿಲ ಕಂತ್ರಿಕರ, (23), ರೋಹಿತ ಸುಭಾಷ ಕಂತ್ರಿಕರ (23), ರಾಜರಾಮ ಅಶೋಕ  ಠಾಕರಕರ(23) ಎಂಬುವವರೆ ಗಾಯಾಳುಗಳು.

ಲಾರಿ ಚಾಲಕನಾದ ಬಾಬುಷಾ ಗುಂಡಪ್ಪ ಎಂಬಾತನು ಕುಮಟಾ ಕಡೆಯಿಂದ ಅಂಕೋಲಾ ಕಡೆ ತನ್ನ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಎದುರಿನಿಂದ ಬರುತ್ತಿದ್ದ ಕಾರನ್ನು ನೋಡಿಯು ತನ್ನ ಮುಂದೆ ಹೊಗುತ್ತಿದ್ದ ರಿಕ್ಷಾ ಓವರಟೇಕ್ ಮಾಡುವ ಬರದಲ್ಲಿ ಅಂಕೋಲಾ ಕಡೆಯಿಂದ ಕುಮಟಾ ಕಡೆ ಹೊಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ. ಗಾಯಾಳುಗಳನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ . ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD

Share This
300x250 AD
300x250 AD
300x250 AD
Back to top