Slide
Slide
Slide
previous arrow
next arrow

ಬಿಜೆಪಿ ತೊರೆದು ‘ಕೈ’ ಹಿಡಿದ ನಾಗರಾಜ್ ಹಿತ್ತಲಮಕ್ಕಿ

300x250 AD

ಕುಮಟಾ: ಬಿಜೆಪಿ ಮುಖಂಡ ಗೋಕರ್ಣದ ನಾಗರಾಜ್ ಹಿತ್ತಲಮಕ್ಕಿ ಹಾಗೂ ಅವರ ಪತ್ನಿ ಸೀಮಾ ಹಿತಲಮಕ್ಕಿ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ಗೋಕರ್ಣದ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಪ್ರಭಾರಿಯಾಗಿದ್ದ ನಾಗರಾಜ್ ಹಿತ್ತಲಮಕ್ಕಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಹಾಗೂ ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್ ಹಿತ್ತಲಮಕ್ಕಿ ರಾಜಕಾರಣ ಎಂದರೇ ನಾಲ್ಕು ದಿನದ ಸಂಭ್ರಮವಲ್ಲ. ಅದು ತಪ್ಪಸ್ಸಾಗಿದ್ದು ಇಂದು ಕಾರ್ಯರೂಪಕ್ಕೆ ತರುತ್ತೇವೆ. ಕಾಂಗ್ರೆಸ್ ಸೇರಿದ್ದು ಸಾಕಷ್ಟು ಖುಷಿ ನೀಡಿದ್ದು, ಈ ಬಾರಿ ನಿವೇದಿತ್ ಆಳ್ವಾ ಕ್ಷೇತ್ರದಲ್ಲಿ ಗೆಲುವು ಪಡೆಯುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.

300x250 AD

ಇನ್ನು ಮಾರ್ಗರೇಟ್ ಆಳ್ವಾ ಮಾತನಾಡಿ ಈ ಬಾರಿ ನಿವೇದಿತ್ ಆಳ್ವಾಗೆ ಆಶಿರ್ವಾದ ಮಾಡಿ, ಕ್ಷೇತ್ರದಲ್ಲಿ ನಿಮ್ಮ ಮನೆಯ ಮಗ ಮಾಡಿದ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಭ್ಯರ್ಥಿ ನಿವೇದಿತ್ ಆಳ್ವಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಲವು ಹಾಲಕ್ಕಿ ಸಮುದಾಯದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

Share This
300x250 AD
300x250 AD
300x250 AD
Back to top