Slide
Slide
Slide
previous arrow
next arrow

ಮಾನವೀಯತೆ ಮೆರೆದ ಪ್ರಶಾಂತ್ ದೇಶಪಾಂಡೆ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ನೆರವು

300x250 AD

ಹಳಿಯಾಳ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 11 ತಿಂಗಳ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವ ಮೂಲಕ ಯುವ ಮುಖಂಡ ಪ್ರಶಾಂತ್ ದೇಶಪಾಂಡೆ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಮಂಗಳವಾಡ ಗ್ರಾಮದ 11 ತಿಂಗಳ ಮಗುವಿಗೆ ಲಿವರ್ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಲಿವರ್ ವರ್ಗಾವಣೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದು ಮಗುವಿನ ತಂದೆ ಲಿವರ್ ನೀಡಲು ಮುಂದಾಗಿದ್ದರು. ಆದರೆ ಚಿಕಿತ್ಸೆಗೆ ಸುಮಾರು 20 ಲಕ್ಷಕ್ಕೂ ಅಧಿಕ ಹಣ ಬೇಕಾಗಿದ್ದರಿಂದ ಬಡ ಕುಟುಂಬ ಆಗಿದ್ದರಿಂದ ನೆರವಿಗಾಗಿ ಶಾಸಕ ದೇಶಪಾಂಡೆ ಅವರ ಬಳಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು.

300x250 AD

ಈ ವೇಳೆ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಕುಟುಂಬಸ್ಥರಿಗೆ ನೆರವಾಗಿದ್ದು ಸುಮಾರು 9 ಲಕ್ಷ ರೂಪಾಯಿ ಹಣವನ್ನ ಚಿಕಿತ್ಸೆಗೆ ನೀಡಿದ್ದಾರೆ. ಇನ್ನು ಶಸ್ತ್ರಚಿಕಿತ್ಸೆ ನಡೆದು ಲಿವರ್ ವರ್ಗಾವಣೆ ಸಹ ಮಾಡಲಾಗಿದ್ದು ಸದ್ಯ ಮಗು ಆರೋಗ್ಯವಾಗಿದೆ. ಇನ್ನು ಮಗುವಿನ ಚಿಕಿತ್ಸೆಗೆ ಸ್ಪಂದಿಸಿ ಜೀವ ಉಳಿವಿಗೆ ಸಹಕರಿಸಿದ ದೇಶಪಾಂಡೆ ಅವರಿಗೆ ಶುಕ್ರವಾರ ಕುಟುಂಬಸ್ಥರು ಆಗಮಿಸಿ ದೇಶಪಾಂಡೆ ಹಾಗೂ ಅವರ ಪುತ್ರ ಪ್ರಶಾಂತ್ ದೇಶಪಾಂಡೆ ಅವರಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

Share This
300x250 AD
300x250 AD
300x250 AD
Back to top