Slide
Slide
Slide
previous arrow
next arrow

ಜೀವನ ಸಂಸ್ಕೃತಿ ಅಧ್ಯಯನಕ್ಕಾಗಿ ಸೈಕಲ್‌ನಲ್ಲಿ ಯುವಕನ ದೇಶ ಪರ್ಯಟನೆ

300x250 AD

ದಾಂಡೇಲಿ: ಈ ದೇಶದ ಉದ್ದಗಲದಲ್ಲಿರುವ ಜನತೆ ಜೀವನ ಸಂಸ್ಕೃತಿ ಮತ್ತು ಜನಜೀವನದ ಕುರಿತಂತೆ ಅಧ್ಯಯನ ನಡೆಸುವ ಉದ್ದೇಶದಿಂದ ಬೆಂಗಳೂರಿಬನ ಯುವಕನೋರ್ವ ರಾಷ್ಟ್ರವ್ಯಾಪಿ ಸೈಕಲ್ ಮೂಲಕ ಯಾತ್ರೆ ಆರಂಭಿಸಿ ಗಮನ ಸೆಳೆದಿದ್ದಾನೆ.

ಬೆಂಗಳೂರಿನ ನಿವಾಸಿಯಾಗಿರುವ ಅಶುತೋಷ್ ಬೆಳ್ಳೂರು ಎಂಬ ಸ್ನಾತಕೋತ್ತರ ಪದವೀಧರ ಈ ಯಾತ್ರೆಯನ್ನು ಕೈಗೊಂಡ ಸಾಹಸಿ. ಮಾರ್ಚ್ 13ರಂದು ಬೆಂಗಳೂರಿನಿಂದ ಆರಂಭಗೊಂಡ ಈ ಸೈಕಲ್ ಯಾತ್ರೆ ಒಟ್ಟು ಅಲ್ಲಿಂದ 2.5 ವರ್ಷಗಳವರೆಗೆ ನಡೆಯಲಿದ್ದು, ದೇಶದ ಮೂಲೆ ಮೂಲೆಗೂ ಸಂಚರಿಸಲಿದ್ದಾನೆ. ಬುಧವಾರ ಸಂಜೆ ಸೈಕಲ್ ಯಾತ್ರೆಯ ಮೂಲಕ ದಾಂಡೇಲಿಗೆ ಆಗಮಿಸಿದ್ದ ಅಶುತೋಷ್ ಬೆಳ್ಳೂರು ಈತನಿಗೆ ನಗರದಲ್ಲಿ ಆತ್ಮೀಯವಾಗಿ ಸ್ವಾಗತ ನೀಡಲಾಯಿತು.

300x250 AD
Share This
300x250 AD
300x250 AD
300x250 AD
Back to top