• Slide
    Slide
    Slide
    previous arrow
    next arrow
  • ಮುರ್ಕವಾಡದ ಹೋಟೆಲ್ ಮೇಲೆ ಪೊಲೀಸ್ ದಾಳಿ

    300x250 AD

    ದಾಂಡೇಲಿ: ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದ ಸೋಮೇಶ್ವರ ಹೋಟೆಲ್ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಮಾಲು ಸಹಿತ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

    ದಾಳಿಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ತಯಾರಾದ ಮದ್ಯ 32.670 ಲೀ. ಹಾಗೂ ಬಿಯರ್ 24.800 ಲೀ.ನ್ನು ಜಪ್ತಿ ಮಾಡಲಾಗಿ, ಸುರೇಶ್ ಕಾಂಬಳೆ ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಶಪಡಿಸಿಕೊಳ್ಳಲಾದ ಮದ್ಯದ ಬೆಲೆ 21,854 ಎಂದು ಅಂದಾಜಿಸಲಾಗಿದೆ. ಅಬಕಾರಿ ನಿರೀಕ್ಷಕರಾದ ಜಿ.ಎಸ್.ನಾಯಕ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿದ್ದರಾಮ ಕೊರಣ್ಣವರ್, ಸಂತೋಷ್ ಸುಬ್ಬಣ್ಣವರ್, ಬಸವರಾಜ್ ನಾಯಕ ಅವರು ದಾಳಿ ನಡೆಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top