Slide
Slide
Slide
previous arrow
next arrow

ನಮ್ಮ ಅಂಕೋಲಾದ ಪ್ರತಿಭೆಗಳು ನಮ್ಮ ಹೆಮ್ಮೆ: ರಾಘು ಕಾಕರಮಠ

300x250 AD

ಅಂಕೋಲಾ : ನಮ್ಮ ಅಂಕೋಲಾದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಟೈಕ್ವಾಂಡೋ ಸಂಸ್ಥೆಯ ಮೂಲಕ ಸಾಧನೆ ಮೆರೆಯುತ್ತಿರುವದು ನಮ್ಮ ಜಿಲ್ಲೆಗೆ ಹೆಮ್ಮೆ ತರುವಂತಾಗಿದೆ ಎಂದು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಾಮಠ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ಟೈಕ್ವಾಂಡೋ ಸಂಸ್ಥೆಯಿ0ದ ನೀಡಲಾಗುವ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ ಟೈಕ್ವಾಂಡೋ ಸಂಸ್ಥೆಯ ಮೂಲಕ ನಮ್ಮ ತಾಲೂಕಿನ ಪ್ರತಿಭೆಗಳನ್ನು ತರಬೇತಿಗೊಳಿಸಿ ಅವರಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶಕಲ್ಪಿಸುತ್ತಿರುವ ತರಬೇತುದಾರ ಇಮ್ರಾಜ್ ನಾಡರ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಪತ್ರಕರ್ತ ಸುಭಾಷ್ ಕಾರೇಬೈಲ್ ಮಾತನಾಡಿ ಇಂತಹ ಕಲೆಯ ಕುರಿತು ತರಬೇತಿ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಅರ್ಥಪೂರ್ಣ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುವಂತಾಗಲಿ ಎಂದರು.
ತರಬೇತುದಾರ ಇಮ್ರಾಜ್ ನಾಡರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಸರಸ್ವತಿ ಗೌಡ, ಬೇಲೆಕೇರಿಯ ಬೊಗ್ರಿಗದ್ದೆ ಶಾಲೆಯ ಶಿಕ್ಷಕಿ ಸ್ರಜನಾ ನಾಯಕ, ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top