• Slide
    Slide
    Slide
    previous arrow
    next arrow
  • ಗರ್ಭಕೊಶದ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ

    300x250 AD

    ಹೊನ್ನಾವರ: ಸರಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದಾರೆ. ಅಂತಹದರಲ್ಲಿ ಹಲವಾರು ಕೊರತೆಗಳ ನಡುವೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಹೊನ್ನಾವರದ ತಾಲೂಕಾ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು ಜನಸಾಮನ್ಯರ ಆಶಾಕಿರಣವಾಗಿದೆ.

    ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ರೋಗ ತಜ್ಞರಾದ ಡಾ. ಕೃಷ್ಣಾ ಜಿ 46 ವರ್ಷದ ಮಹಿಳೆಯೊಬ್ಬಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಸರಿಸುಮಾರು 5 ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಕೆಲ ದಿನಗಳ ಹಿಂದೆ ತೀವೃತರನಾದ ರಕ್ತಸ್ರಾವ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆ ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಸ್ತ್ರೀ ರೋಗ ತಜ್ಞರಾದ ಡಾ. ಕೃಷ್ಣಾ ಜಿ ಮಹಿಳೆಯನ್ನು ಪರೀಕ್ಷಿಸಿ ಹೊಟ್ಟೆಯಲ್ಲಿ ದೊಡ್ಡದಾದ ರ್ದುಮಾಂಸಯುಕ್ತ ಗಡ್ಡೆ ಬೆಳದಿರುವುನ್ನು ಖಚಿತಪಡಿಸಿಕೊಂಡರು.ಆದರೆ ಮಹಿಳೆಯ ಈ ಮೊದಲು ಎರಡೆರಡು ಬಾರಿ ಸಿಜೆರಿಯನ್ ಹೆರಿಗೆಗೆ ಒಳಗಾಗಿದ್ದರಿಂದ ತೀವೃತರ ತೊಂದರೆಯಲ್ಲಿದ್ದಳು.

    ನಂತರ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ರ್ದುಮಾಂಸಯುಕ್ತ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಮಹಿಳೆಯು ಅಪಾಯದಿಂದ ಪಾರಾಗಿದ್ದು ಈಗ ಆರೋಗ್ಯವಾಗಿದ್ದಾಳೆ. ಮಹಿಳೆಯು ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ದಾಖಲಾಗಿರುವದರಿಂದ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ರೀತಿಯ ಚಿಕಿತ್ಸೆ ಮತ್ತು ಸೌಲಭ್ಯಗಳು ಉಚಿತವಾಗಿ ಲಭ್ಯವಾಗಿದೆ.

    300x250 AD

    ಶಸ್ತ್ರ ಚಿಕಿತ್ಸೆಯಲ್ಲಿ ಡಾ. ಕೃಷ್ಣಾ ಜಿ ಯವರ ಜೊತೆ ಅರವಳಿಕೆ ತಜ್ಞರಾದ ಡಾ. ಮಹೇಶ ಶೆಟ್ಟಿ, ಕಾರ್ಯನಿರ್ವಹಿಸಿದ್ದರು. ಶುಶ್ರುಷಕಾಧಿಕಾರಿಗಳಾದ ಮಂಗಲಾ ನಾಯ್ಕ ಮತ್ತು ಭಾರತಿ ನಾಯ್ಕ ಇತರೆ ಸಿಬ್ಬಂಧಿಗಳಾದ ಕೃಷ್ಣಾ ಗೌಡ, ಮತ್ತು ಸೋನಾ ಸಹಕರಿಸಿದರು. ವೈದ್ಯರ ಈ ಸಾಧನೆಗೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿ ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top