• Slide
    Slide
    Slide
    previous arrow
    next arrow
  • ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಂಘಟನೆಗಳ ಮುಖಂಡರ ಬೆಂಬಲ

    300x250 AD

    ದಾಂಡೇಲಿ: ನಗರದ ಕಾಂಗ್ರೆಸ್ ಮುಖಂಡರಾದ ಪ್ರಭುದಾಸ್ ಎನಿಬೇರಾ ಅವರ ನೇತೃತ್ವದಡಿ ದಾಂಡೇಲಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಶಾಸಕರಾದ ಆರ್.ವಿ.ದೇಶಪಾಂಡೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದರು.

    ಶ್ರೀಶಿವಶರಣ ಹರಳಯ್ಯ ಸಮಾಜದ ಪ್ರಮುಖರು ಹಾಗೂ ಮಾಜಿ ನಗರ ಸಭಾ ಸದಸ್ಯರಾದ ಸತೀಶ ನಾಯ್ಕ, ಪ್ರಮೋದ್ ರೇವಣಕರ್, ರಮೇಶ್ ಚಂದಾವರ್, ದುರ್ಗಾನಂದ್ ನೇತ್ರೆಕರ್, ಆದಿಜಾಂಬವAತ ಸಂಘದ ಅಧ್ಯಕ್ಷರಾದ ಚಂದ್ರಕಾAತ ನಡಿಗೇರ್, ಪ್ರಮುಖರಾದ ಹನುಮಂತ ಹರಿಜನ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪರಶುರಾಮ ಸೂರನಾಯ್ಕ, ರಾಜೇಶ್ ಕಾಂಬಳೆ, ಜೈ ಸೇವಾಲಾಲ್ ಸಮಾಜದ ಶಂಕರ್ ಕೃಷ್ಣ ಪೂಜಾರಿ, ಶಿವಾಜಿ ರಾಥೋಡ್, ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಪ್ರಮುಖರಾದ ಸರಸ್ವತಿ ಚೌವ್ಹಾಣ್, ಸತೀಶ್ ಚೌವ್ಹಾಣ್, ಮಹರ್ಷಿ ವಾಲ್ಮೀಕಿ ಸಮಾಜದ ರೋಹಿತ್ ತಳವಾರ್ ಹಾಗೂ ಮಾದಿಗ ಸಮಾಜದ ಪ್ರಮುಖರು ಆರ್.ವಿ.ದೇಶಪಾಂಡೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆಯನ್ನು ನೀಡಿದರು.

    300x250 AD

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರರಾದ ಪ್ರಭುದಾಸ್ ಎನಿಬೇರಾ, ರವಿಕುಮಾರ್ ಚಾಟ್ಲಾ ಮೊದಲಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top