• Slide
    Slide
    Slide
    previous arrow
    next arrow
  • ನಾಟ್ಯವಿನಾಯಕ ಸನ್ನಿಧಿಯಲ್ಲಿ 1008 ನಾರಿಕೇಳ ಹವನ ಸಂಪನ್ನ

    300x250 AD

    ಸಿದ್ದಾಪುರ: ತಾಲೂಕಿನ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ಸಂಕಷ್ಟಹರ ಚತುರ್ಥಿಯ ದಿನದಂದು ಲೋಕ ಕಲ್ಯಾಣಾರ್ಥವಾಗಿ 1008 ನಾರಿಕೇಳ ಗಣಹವನ ಮಹಾಯಾಗ ಸಹಸ್ರಾಧಿಕ ಭಕ್ತರ ಸಮ್ಮುಖದಲ್ಲಿ ನಡೆಯಿತು.

    ಗೋಕರ್ಣದ ವೇದ ವಿದ್ವಾಂಸ ಷಡಕ್ಷರಿ ಕೃಷ್ಣ ಭಟ್ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ನೇತೃತ್ವದಲ್ಲಿ ಹದಿನಾರಕ್ಕೂ ಅಧಿಕ ವೈದಿಕರಿಂದ ನಡೆಯಿತು‌.ಬಳಿಕ ಮಹಾರಥೋತ್ಸವ ಮತ್ತು ಮಹಾ ಅನ್ನಸಾರ್ಪಣೆ ಕೂಡ ನಡೆಯಿತು.

    300x250 AD

    ಪ್ರಸಿದ್ಧ ಜ್ಯೋತಿಷಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಶರ್ಮಾಜಿ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ, ಸೆಲ್ಕೋದ ಸಿಇಓ ಮೋಹನ ಹೆಗಡೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವೆಂಕಟೇಶ ಹೆಗಡೆ, ಕುಮಟಾದ ಡಾ.ಜಿ.ಜಿ.ಹೆಗಡೆ ಸೇರಿದಂತೆ ಇತರರು ಪಾಲ್ಗೊಂಡರು. ಸ್ಥಳೀಯರು, ದೇವಸ್ಥಾನದ ಭಕ್ತರು ಶ್ರೀದೇವರ ಸಂಪ್ರೀತ್ಯರ್ಥ ಸೇವೆ ಸಲ್ಲಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top