Slide
Slide
Slide
previous arrow
next arrow

ಏ.9ಕ್ಕೆ ಶೀಗೆಹಳ್ಳಿಯಲ್ಲಿ ‘ನಾದಪೂಜೆ’

300x250 AD

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ವತಿಯಿಂದ ಸಂಕಷ್ಟಿ ಪ್ರಯುಕ್ತ ಏ.9 ರವಿವಾರದಂದು ಮಧ್ಯಾಹ್ನ 3ರಿಂದ ತಾಲೂಕಿನ ಶೀಗೇಹಳ್ಳಿಯ ಶ್ರೀ ಚೆನ್ನಕೇಶವ ದೇವಸ್ಥಾನ(ಶ್ರೀ ಬಟ್ಟೆಗಣಪತಿ ದೇವರ ಸನ್ನಿಧಿಯಲ್ಲಿ) ‘ನಾದಪೂಜೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಗೀತ ಕಾರ್ಯಕ್ರಮಕ್ಕೆ ಕಲಾವಿದರಾಗಿ ಗಾಯನದಲ್ಲಿ ಸತೀಶ್ ಭಟ್ ಮಾಳಕೊಪ್ಪ, ಕು.ಸಂಗೀತಾ ಹೆಗಡೆ ಗಿಳಿಗುಂಡಿ ಆಗಮಿಸಲಿದ್ದು, ಸಂವಾದಿನಿ ಸ್ವತಂತ್ರ ವಾದನದಲ್ಲಿ ಭರತ್ ಹೆಗಡೆ ಹೆಬ್ಬಲಸು ಕಾಣಿಸಿಕೊಳ್ಳಲಿದ್ದಾರೆ.
ಇವರಿಗೆ ತಬಲಾದಲ್ಲಿ ನಿತಿನ್ ಹೆಗಡೆ ಕಾಲಗದ್ದೆ, ಅಕ್ಷಯ್ ಭಟ್ ಹಂಸಳ್ಳಿ, ಸಂವಾದಿನಿಯಲ್ಲಿ ಗುರುಪ್ರಸಾದ್ ಹೆಗಡೆ ಸಹಕರಿಸಲಿದ್ದು, ಸಂಗೀತಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top