Slide
Slide
Slide
previous arrow
next arrow

ಶಾಸಕ ಸುನೀಲ್ ಹೇಳಿಕೆಗೆ ಮರಳು ಗುತ್ತಿಗೆದಾರ ಸಂಘದ ಖಂಡನೆ

300x250 AD

ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಸರಬರಾಜುಗುತ್ತಿದ್ದ ಮರಳುಗಾರಿಕೆಯ ಕಮಿಷನ್ ಹಾಗೂ ದರ ವಿಷಯದ ಕುರಿತು ಶಾಸಕ ಸುನೀಲ ನಾಯ್ಕ ಹೇಳಿಕೆಗೆ ತಾರಿಬಾಗಿಲು ಮರಳು ಗುತ್ತಿಗೆದಾರ ಸಂಘವು ಖಂಡಿಸಿದೆ.

ಶಾಸಕ ಸುನೀಲ ನಾಯ್ಕ ಮಂಕಿಯಲ್ಲಿ ಬಿಜೆಪಿ ಯುವಮೋರ್ಚಾ ಸಭೆಯಲ್ಲಿ ಆಡಿದ ಮಾತು ಅಧಿಕೃತ ಮರಳುಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಅವರು ಸಭೆಯಲ್ಲಿ ಹಿಂದಿನ ಶಾಸಕರಿಗೆ ಮರಳು ಪರವಾನಗಿಯವರು ಹಣ ನೀಡುತ್ತಿದ್ದರು ಎಂದು ಹೇಳಿದ್ದರು. ಆದರೆ ಈ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ತಾರಿಬಾಗಿಲು ಗುತ್ತಿಗೆದಾರ ಸಂಘದವರು ಪ್ರಕಟಣೆಯ ಮೂಲಕ ತಿಳಿಸಿದೆ.

300x250 AD

ಯಾರು ಕೂಡಾ ಹಿಂದಿನ ಶಾಸಕರಿಗೆ ಆಗಲಿ, ಯಾವುದೇ ಜನಪ್ರತಿನಿಧಿಗಳಿಗಾಗಲಿ ಯಾವುದೇ ರೀತಿಯ ಹಣ ನೀಡಿರುವುದಿಲ್ಲ. ಅಲ್ಲದೇ ಒಂದು ಲೋಡ್ ಮರಳಿಗೆ 30ರಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ಕೂಡಾ ಸತ್ಯಕ್ಕೆ ದೂರವಾಗಿದೆ. ಕಳೆದ ಒಂದು ವರ್ಷದಿಂದ ಅಧಿಕೃತ ಮರಳುಗಾರಿಕೆ ನಡೆದಿಲ್ಲ. ಇದರಿಂದ ಸರ್ಕಾರಕ್ಕೆ ಸಲ್ಲಿಸಬೇಕಾದ ರಾಜಧನ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಶಾಸಕರು ನೀಡಿದ ಹೇಳಿಕೆಯನ್ನು ಹೊನ್ನಾವರ ಶರಾವತಿ ನದಿ ಮರಳು ಗುತ್ತಿಗೆದಾರ ಸಂಘ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top