Slide
Slide
Slide
previous arrow
next arrow

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ

300x250 AD

ಯಲ್ಲಾಪುರ: ಹೊಟೇಲ್ ಎದುರಿನಲ್ಲಿ ನಿಲ್ಲಿಸಿದ್ದ ಬೈಕ್ ನಲ್ಲಿ ಅನಧಿಕೃತ ಮದ್ಯವನ್ನು ಅಬಕಾರಿ ಇಲಾಖೆಯವರು ಪತ್ತೆ ಮಾಡಿರುವ ಘಟನೆ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ.
ಮುಂಡಗೋಡದ ಅಕ್ಷಯ ಹೋಟೆಲ್ ಎದುರುಗಡೆ ಪ್ರವೀಣ್‌ಕುಮಾರ ಶೆಟ್ಟಿ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿದಾಗ 10.260 ಲೀಟರ್ ಮದ್ಯ, 20.650 ಲೀಟರ್ ಬಿಯರ್ ಪತ್ತೆ ಆಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಪಡಿಸಲಾಗಿದೆ.
ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಜಿಲ್ಲಾ ಉಪ ಆಯುಕ್ತರು ಹಾಗೂ ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಯಲ್ಲಾಪುರ ವಲಯ ನಿರೀಕ್ಷಕರಾದ ಪ್ರಶಾಂತ ಪಾಟೀಲ, ಉಪ ನಿರೀಕ್ಷಕರಾದ ಅನಿಲ ಕೊಕಟನೂರ, ಸಿಬ್ಬಂದಿಗಳಾದ ಅಭಿಷೇಕ ಬೋರಕರ, ಸಿದ್ಧಾರೂಡ ಬನ್ಸೋಡೆ, ಮೋಹನ ಮೊಗೇರ, ತಿಪ್ಪಣ್ಣ ಹುಲ್ಲೂರ, ಪ್ರವೀಣ ಹೊಸಕೋಟೆ, ಸಾಧಿಕ ಕಿತ್ತೂರ ದಾಳಿಯಲ್ಲಿ ಭಾಗವಹಿಸಿದ್ದರು. ವಶಪಡಿಸಿಕೊಂಡಿರುವ ಮಧ್ಯ ಹಾಗೂ ದ್ವಿಚಕ್ರ ವಾಹನದ ಮೌಲ್ಯ 94,865 ರೂಪಾಯಿ ಎಂದು ಅಂದಾಜಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top