Slide
Slide
Slide
previous arrow
next arrow

ಆಕಸ್ಮಿಕ ಅಗ್ನಿ ಅವಘಡ: ಎರಡು ಎಕರೆಯಷ್ಟು ತೋಟ ಬೆಂಕಿಗಾಹುತಿ

300x250 AD

ಶಿರಸಿ: ಆಕಸ್ಮಿಕವಾಗಿ ಅಗ್ನಿ ತಗುಲಿದ ಪರಿಣಾಮ ಎರಡು ಎಕರೆಯಷ್ಟು ಅಡಿಕೆ ತೋಟ ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲ್ಲಕೈನಲ್ಲಿ ನಡೆದಿದೆ.


ಮಧುಕೇಶ್ವರ ಗಣಪತಿ ಹೆಗಡೆ‌ ಎಂಬುವವರಿಗೆ ಸಂಬಂಧಿಸಿದ ಐದಾಳಿಗದ್ದೆಯ ಹೊಸ್ತೋಟಕ್ಕೆ ಬೆಂಕಿ ತಗುಲಿರುವುದು ಗಮನಕ್ಕೆ ಬಂದಿತು. ಬೆಂಕಿ ತಗುಲಿದ ಪರಿಣಾಮ ಅಡಿಕೆ ಸಸಿಗಳು, ಮರಗಳು, ಬಾಳೆ, ಕಾಳುಮೆಣಸು, ಜಾಯಿಕಾಯಿ ‌ಮತ್ತಿತರ ಗಿಡಗಳೂ ಕರಕಲಾಗಿವೆ.
ಅಗ್ನಿ ಶಾಮಕ‌ ದಳದ ವಾಹನ ಅಡಿಕೆ ತೋಟಕ್ಕೆ ದಾರಿ‌ ಇಲ್ಲದೇ ವಾಪಸ್ ಆಗಿದ್ದರಿಂದ ಊರವರ ಸಹಕಾರದಿಂದ ಬೆಂಕಿ‌ ನಂದಿಸುವ ಪ್ರಯತ್ನ ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top