Slide
Slide
Slide
previous arrow
next arrow

ವಿದ್ಯುತ್ ಲೈನ್ ಸ್ಪರ್ಶ: ಬಿಳಿಹುಲ್ಲು ತುಂಬಿದ್ದ ಲಾರಿ ಸಂಪೂರ್ಣ ಭಸ್ಮ

300x250 AD

ಶಿರಸಿ: ತಾಲೂಕಿನ ಬಿಸಲಕೊಪ್ಪ ಬಳಿ ಬಿಳಿಹುಲ್ಲು ತುಂಬಿದ್ದ ಲಾರಿಗೆ ವಿದ್ಯುತ್ ಲೈನ್ ತಾಗಿ, ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾದ ಘಟನೆ ಗುರುವಾರ ನಡೆದಿದೆ.

ದಾಸನಕೊಪ್ಪದ ರಂಗಾಪುರದಿಂದ ಬಿಳಿಹುಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿಗೆ ಮೇಲಿನ ಬಿಸಲಕೊಪ್ಪ ಸಮೀಪದಲ್ಲಿ ವಿದ್ಯುತ್ ಲೈನ್ ತಾಗಿ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಪೂರ್ತಿ ಲಾರಿಗೆ ಆವರಿಸಿದ ಬೆಂಕಿಗೆ ಲಕ್ಷಾಂತರ ಮೌಲ್ಯದ ಬಿಳಿಹುಲ್ಲು ಹಾಗು ಲಾರಿ ಸಿಲುಕಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಸಾರ್ವಜನಿಕರು, ಗ್ರಾಮಸ್ಥರು ಹರಸಾಹಸ ಪಟ್ಟಿದ್ದು, ಲಾರಿ ಚಾಲಕ ಹಾಗು ಇತರ ಸಹಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

300x250 AD

ಶಿರಸಿ ಗ್ರಾಮೀಣ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ತಂತಿಗಳು ಜೋತು ಬಿದ್ದಿರುವುದೇ ಈ ಘಟನೆಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

Share This
300x250 AD
300x250 AD
300x250 AD
Back to top