Slide
Slide
Slide
previous arrow
next arrow

ಕ.ರಾ.ಖಾ.ಶಾ.ಶಿ. ಶಿಕ್ಷಕೇತರ ಒಕ್ಕೂಟದ ರಾಜ್ಯ ಮಟ್ಟದ ಸಮಾವೇಶ, ವಾರ್ಷಿಕೋತ್ಸವ

300x250 AD

ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ ಇವರಿಂದ ರಾಜ್ಯಮಟ್ಟದ ಸಮಾವೇಶ ಮತ್ತು ವಾರ್ಷಿಕೋತ್ಸವವು ಮಾ.26 ರವಿವಾರದಂದು ಬೆಳಿಗ್ಗೆ 10-30 ಕ್ಕೆ ಸಾಮ್ರಾಟ ಹೋಟೇಲ್ ವಿನಾಯಕ ಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಆಗಮಿಸಲಿದ್ದಾರೆ. ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಕ.ರಾ.ಖಾ.ಶಾ.ಶಿ. ಹಾಗೂ ಶಿಕ್ಷಕೇತರ ಒಕ್ಕೂಟ (ರಿ.) ಅಧ್ಯಕ್ಷ ಶಾಂತಾರಾಮ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ, ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳಿ ನಿರ್ದೇಶಕ ಶ್ರೀಪಾದ ಹೆಗಡೆ, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕ, ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ, ಉ.ಕ. ಜಿಲ್ಲಾ ಶಿಕ್ಷಕ/ ಶಿಕ್ಷಕಿಯರ ನಿರಂತರ ಸಹಾಯವಾಣಿ ಅಧ್ಯಕ್ಷ ವಿಶ್ವನಾಥ ಗೌಡ, ಶ್ರೀ ಪಂದಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಹೊನ್ನಾವರ, ತಾಲೂಕ ಒಕ್ಕಲಿಗ ಯುವ ವೇದಿಕೆ ಶಂಕರ ಗೌಡ, ಕ.ರಾ.ಖಾ.ಶಾ.ಶಿ. ಹಾಗೂ ಶಿಕ್ಷಕೇತರ ಒಕ್ಕೂಟ ಉಪಾಧ್ಯಕ್ಷ ಮೌನೇಶ ಪಿ. ಯಾದವ್, ಕ.ರಾ.ಖಾ.ಶಾ.ಶಿ. ಹಾಗೂ ಶಿಕ್ಷಕೇತರ ಒಕ್ಕೂಟ ಉಪಾಧ್ಯಕ್ಷ ವಾಹಿದುಲಹೈ ಪಾಟೀಲ್ ಆಗಮಿಸಲಿದ್ದಾರೆ ಎಂದು ಕ.ರಾ.ಖಾ.ಶಾ.ಶಿ. ಹಾಗೂ ಶಿಕ್ಷಕೇತರ ಒಕ್ಕೂಟ (ರಿ.) ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಕಿರಣ ಭಟ್ಟ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top