• Slide
    Slide
    Slide
    previous arrow
    next arrow
  • ಅರಣ್ಯವಾಸಿಗಳ ಪ್ರತಿಭಟನೆ: ಸ್ಪಷ್ಟ ಲಿಖಿತ ಉತ್ತರಕ್ಕಾಗಿ ನಾಲ್ಕು ತಾಸು ಧರಣಿ

    300x250 AD

    ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು, ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಸಮಸ್ಯೆ ಮತ್ತು ದೌರ್ಜನ್ಯಗಳಿಗೆ ಸ್ಪಷ್ಟ ಉತ್ತರವನ್ನು ನೀಡುವ ಕುರಿತು ಜಿಲ್ಲಾದ್ಯಂತ ಆಗಮಿಸಿದ ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಧರಣಿ ಮತ್ತು ಪ್ರತಿಭಟನೆ ಡಿ.ಎಫ್.ಓ ಕಚೇರಿಯ ಆವರಣದಲ್ಲಿ ಜರುಗಿತು.

     ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸ್ಥಳೀಯ ಡಿ.ಎಫ್.ಓ. ಕಚೇರಿಯಲ್ಲಿ ಅಸ್ಪಷ್ಟ ಉತ್ತರಕ್ಕೆ ಸ್ಪಷ್ಟತೆ ಕೂಡಿದ ಮತ್ತು ಕಾನೂನಾತ್ಮಕ ವಿಶ್ಲೇಷಣೆಯ ಉತ್ತರಕ್ಕೆ ಆಗ್ರಹಿಸಿ ಸುಮಾರು ನಾಲ್ಕು ತಾಸು ಅರಣ್ಯವಾಸಿಗಳು ಧರಣಿ ಕಾರ್ಯಕ್ರಮವನ್ನು ಜರುಗಿಸಿದರು.

    ಪ್ರವೇಶ ದ್ವಾರಕ್ಕೆ ಕೀಲಿ:
    ಅರಣ್ಯವಾಸಿಗಳು ಡಿಎಫ್‌ಓ ಆಫೀಸಿಗೆ ಪ್ರವೇಶಿಸದಂತೆ ಪ್ರಧಾನ ದ್ವಾರಕ್ಕೆ ಕೀಲಿಹಾಕಿರುವ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳು ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ದ್ವಾರವನ್ನು ತೆರವುಗೊಳಿಸಿದರು. ಪೋಲಿಸರ ಮಧ್ಯಸ್ಥಿಕೆಯ ಮೇರೆಗೆ ಕೆಲಸದ ಅವಧಿಯಲ್ಲಿ ಕಚೇರಿಯ ದ್ವಾರಕ್ಕೆ ಹಾಕಿರುವ ಕೀಲಿಗಳನ್ನು ತೆಗೆಸಿರುವ ಘಟನೆಗಳು ಜರುಗಿದವು.

    ನಾಲ್ಕು ತಾಸುಗಳ ಧರಣಿ:
     ಸಿಸಿಎಫ್ ಅವರು ಆಗಮಿಸಿ, ಸ್ಪಷ್ಟ ಲಿಖಿತ ಉತ್ತರವನ್ನು ನೀಡಬೇಕೆಂದು ಹೋರಾಟಗಾರರು ತೀವ್ರ ತರದ ಒತ್ತಡವನ್ನು ಹೇರಿದಾಗಲೂ ಸಹಿತ ಡಿಎಫ್‌ಓ ಅಜ್ಜಯ್ಯ ಯಾವುದೇ ರೀತಿಯ ಸ್ಪಂಧನೆ ನಿಡದ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ತೀವ್ರ ಪ್ರತಿರೋಧ, ಪ್ರತಿಭಟನೆ ಜರುಗಿಸಿದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಾರೇ ಅರಣ್ಯವಾಸಿಗಳು ಮತ್ತು ಅರಣ್ಯ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ಜರುಗಿ ಹಿನ್ನೆಲೆಯಲ್ಲಿ ಪೋಲೀಸ್ ಮಧ್ಯಸ್ಥಿಕೆಯಲ್ಲಿ  ವಾತಾವರಣವು ತಿಳಿಗೊಂಡವು.

    300x250 AD

     ಜಿಲ್ಲಾದ್ಯಂತ ಆಗಮಿಸಿರುವ ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಹೋರಾಟದ ನೇತೃತ್ವವನ್ನು ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಲಕ್ಷ್ಮಣ ಮಾಳ್ಳಕ್ಕನವರ, ಸುನಿಲ್ ನಾಯ್ಕ ಸಂಪಖಂಡ, ನೆಹರೂ ನಾಯ್ಕ ಬಿಳೂರು, ರಾಘು ಕವಂಚೂರು, ಪಾಂಡುರಂಗ ನಾಯ್ಕ ಬೆಳಕೆ, ಭೀಮ್ಸಿ ವಾಲ್ಮೀಕಿ, ದಿನೇಶ್ ನಾಯ್ಕ, ಎಮ್ ಆರ್ ನಾಯ್ಕ ಕಂಡ್ರಾಜಿ, ಶಿವಾಜಿ, ಇಬ್ರಾಹಿಂ ಗೌಡಳ್ಳಿ, ಜೋಗಿ, ಸಾರಂಬಿ ಶೆಖ್, ಯಾಕೂಬ್ ಸಾಬ್, ಮಹೇಂದ್ರ ನಾಯ್ಕ ಕತಗಾಲ, ಜಿಬಿ ನಾಯ್ಕ, ಸುಶೀಲಾ ನಾಯ್ಕ ಕಾನಸೂರು ಮುಂತಾದವರು ವಹಿಸಿದ್ದರು.

    ಅರಣ್ಯ ಅಧಿಕಾರಿಗಳ ಲಿಖಿತ ಉತ್ತರ:
     ಸ್ಪಷ್ಟವಾದ ಉತ್ತರವನ್ನ ಬಯಸಿ ಕಚೇರಿಯ ಆವರಣದಿಂದ ಹೊರ ನಡೆಯವುದಿಲ್ಲ ಎಂದು ಬಿಗಿ ಪಟ್ಟು ಹಿಡಿದ  ಹಿನ್ನೆಲೆಯಲ್ಲಿ ಡಿ.ಎಫ್.ಓ ಅಜ್ಜಯ್ಯ ಅವರು ಅರಣ್ಯ ಇಲಾಖೆಯ ಪರವಾಗಿ ಲಿಖಿತ ಉತ್ತರವನ್ನು ಕೊಟ್ಟು, ಅರಣ್ಯವಾಸಿಯ ಅಧಿಭೋಗ ಮತ್ತು ಸಾಗುವಳಿ ಇರುವ ಕ್ಷೇತ್ರಕ್ಕೆ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳಿಗೆ ಆತಂಕ ಮಾಡುವುದಿಲ್ಲ, ಒಕ್ಕಲೆಬ್ಬಿಸುವುದಿಲ್ಲ ಎಂದು ಲಿಖಿತ ಉತ್ತರವನ್ನು ನೀಡಿದ ಹಿನ್ನೆಲೆಯಲ್ಲಿ ಧರಣಿ ಕಾರ್ಯಕ್ರಮ ಸ್ಥಗಿತಗೊಂಡಿರುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top