• Slide
    Slide
    Slide
    previous arrow
    next arrow
  • ‘ನಮ್ಮೂರ ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ಹೆಗ್ಗೆರೆ ಕೆರೆ ಅಭಿವೃದ್ಧಿ

    300x250 AD

    ಸಿದ್ದಾಪುರ: ತಾಲೂಕಿನ ಹಲಗೇರಿ ಗ್ರಾಮ ಪಂಚಾಯತದ ಹೂಸೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮ ಪಂಚಾಯತ ಹಲಗೇರಿ ಮತ್ತು ‘ಹೆಗ್ಗೆರೆ ಕೆರೆ’ ಅಭಿವೃದ್ಧಿ ಸಮಿತಿ ಹೂಸೂರು ಇವರ ಸಂಯುಕ್ತ ಆಶ್ರಯದಲ್ಲಿ ಹುಸೂರುನಲ್ಲಿ ‘ನಮ್ಮೂರ ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ‘ಹೆಗ್ಗೆರೆ ಕೆರೆ’ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಜುನಾಥ ಪುಟ್ಟ ನಾಯ್ಕ,ಉಪಾಧ್ಯಕ್ಷೆ ಸುಶೀಲ ಮಂಜುನಾಥ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮ್ಮದ ರಿಯಾಜ್ , ಊರ ಕಮಿಟಿ ಅಧ್ಯಕ್ಷರಾದ ಗಣಪತಿ ಕೆರೆಯ ನಾಯ್ಕ, ಒಕ್ಕೂಟದ ಅಧ್ಯಕ್ಷರು/ಕೆರೆ ಸಮಿತಿ ಅಧ್ಯಕ್ಷರಾದ ನಾರಾಯಣ ಈರಾ ನಾಯ್ಕ ಹುಸೂರು, ಗ್ರಾ.ಪಂ ಸದಸ್ಯೆ ಮೋಹಿನಿ ಅಣ್ಣಪ್ಪ ನಾಯ್ಕ, ಬಿ.ಜಿ. ನಾಯ್ಕ ನಿವೃತ್ತ ವಕೀಲರು ಹುಸೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
    ಸೇವಾಪ್ರತಿನಿಧಿಗಳಾದ ಮಧುಮತಿ, ಸುಜಾತಾ, ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಊರಿನ ಗಣ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪ್ರಭಾಕರ್ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಮೇಲ್ವಿಚಾರಕ ಮಹಾದೇವ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಮೇಲ್ವಿಚಾರಕ ಕೃಷ್ಣ ಮೇಸ್ತ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top