• Slide
    Slide
    Slide
    previous arrow
    next arrow
  • ಮಾವಿನ ತೋಟಕ್ಕೆ ಬೆಂಕಿ ಫಸಲು ನಾಶ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ

    300x250 AD

    ಮುಂಡಗೋಡ: ತಾಲೂಕಿನ ಕಾತೂರು ಗ್ರಾಮದ ಆಲಳ್ಳಿಯಲ್ಲಿ ರೈತರೋರ್ವರ ಮಾವಿನ ತೋಟಕ್ಕೆ ಮಧ್ಯಾಹ್ನದ ಬಿಸಿಲಿನಲ್ಲಿ ಬೆಂಕಿ ತಗುಲಿ ಈ ವರ್ಷದ ಮಾವಿನ ಫಸಲು ಎಲ್ಲಾ ನಾಶವಾದ ಘಟನೆ ನಡೆದಿದೆ.
    ಕಾತೂರಿನ ಆಲಳ್ಳಿ ಗ್ರಾಮದ ರೈತ ಕೃಷ್ಣ ಹನುಮಂತಪ್ಪ ಮೂಡಸಾಲಿ ಅವರ ಮೂರು ಎಕರೆ ಜಿ.ಪಿ.ಎಸ್ ಆಗಿರುವ ಮಾವಿನ ತೋಟಕ್ಕೆ ಬೆಂಕಿ ತಗುಲಿ ಈ ವರ್ಷದ ಮಾವಿನ ಫಸಲು ಸುಮಾರು 30 ಸಾವಿರ ಹಾನಿಯಾಗಿದೆ. ಮಾವಿನ ಫಸಲು ಮಾರಾಟ ಮಾಡಿ ಮಕ್ಕಳ ಕಾಲೇಜ ಶುಲ್ಕ ಕಟ್ಟಲು ಯೋಚಿಸಿದ್ದ ಅವರಿಗೆ ಈಗ ಆಘಾತವುಂಟಾಗಿದೆ. ಮಕ್ಕಳು ಪ್ಯಾರಾಮೆಡಿಕಲ್ ಓದುತ್ತಿದ್ದು ಅವರ ವಿದ್ಯಾಭ್ಯಾಸಕ್ಕೆ ತೊಂದರೆಯುoಟಾಗಿದ್ದು ಕೂಲಿ ಮಾಡಿ ಜೀವನ ಮಾಡುವ ಅವರಿಗೆ ಸಹಾಯ ಹಸ್ತ ಬೇಕಾಗಿದೆ.

    ರೈತರ ಬ್ಯಾಂಕ್ ಖಾತೆ ನಂ: ಕೃಷ್ಣ ಹನುಮಂತಪ್ಪ ಮೂಡಸಾಲಿ 64550100002079 ಐಎಫ್ ಸಿ ಕೋಡ್ BARBOVJKATU

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top