• Slide
    Slide
    Slide
    previous arrow
    next arrow
  • ಡಾ.ಶ್ರೀಧರ ಗೌಡರ ‘ಹಾಲಕ್ಕಿ ರಾಕು’ ಕೃತಿಗೆ ಸಿ. ವಾಸುದೇವಾಚಾರ್ ದತ್ತಿನಿಧಿ ಪ್ರಶಸ್ತಿ

    300x250 AD

    ಕುಮಟಾ : 2021 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಿ.ವಾಸುದೇವಾಚಾರ್ ದತ್ತಿನಿಧಿ ಪ್ರಶಸ್ತಿಯನ್ನು ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಅವರ ಕಥಾ ಸಂಕಲನ ‘ಹಾಲಕ್ಕಿ ರಾಕು’ ಕೃತಿಗೆ ಲಭಿಸಿದೆ. ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಮಂದಿರದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಜಯರಾಮ ರಾಯಪುರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

    ಡಾ. ಶ್ರೀಧರ ಗೌಡ ಶಿಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದು, ಸ್ವಂತ ಔದ್ಯೋಗಿಕ ಕ್ಷೇತ್ರದಲ್ಲಿ ತೊಡಗಿದ್ದಾರೆ. ಲೇಖಕರಾಗಿ, ಸಾಹಿತಿಗಳಾಗಿ ಇವರು ತೊಡಗಿಸಿಕೊಂಡಿದ್ದು, ಈ ಹಿಂದೆ ಇವರು ಕುಮಟಾ ತಾಲೂಕಾ ಕ.ಸಾ.ಪ ದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

    300x250 AD

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ವಾನಳ್ಳಿ, ಪ್ರೊ. ಕಾಳೇಗೌಡ ನಾಗವಾರ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top