• Slide
    Slide
    Slide
    previous arrow
    next arrow
  • ಚುನಾವಣೆ:ದಾಂಡೇಲಿಯಲ್ಲಿ ಪೊಲೀಸರಿಗೆ ವಿಶೇಷ ತರಬೇತಿ

    300x250 AD

    ದಾಂಡೇಲಿ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹೇಗೆ ಕರ್ತವ್ಯ ನಿರ್ವಹಿಸಬೇಕು ಹಾಗೂ ಯಾವುದಾದರೂ ಮತಗಟ್ಟೆಯಲ್ಲಿ ವಾಗ್ವಾದ, ಗಲಾಟೆಗಳು ನಡೆದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುವುದರ ಬಗ್ಗೆ ಉಪವಿಭಾಗದ ಪೊಲೀಸರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆಯನ್ನು ನಗರದ ಜನತಾ ವಿದ್ಯಾಲಯದ ಮೈದಾನದಲ್ಲಿ ನಡೆಸಲಾಯಿತು.

    ಉಪವಿಭಾಗದ ದಾಂಡೇಲಿ ನಗರ, ಗ್ರಾಮೀಣ, ಅಂಬಿಕಾನಗರ, ಜೊಯಿಡಾ, ರಾಮನಗರ, ಹಳಿಯಾಳ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರ ವರ್ತನೆ, ಘಟನೆಯನ್ನು ನಿಯಂತ್ರಿಸುವ ವಿಧಾನ, ಶಾಂತಿಯುತ ಚುನಾವಣೆಗೆ ಪೊಲೀಸ್ ಬಂದೋಬಸ್ತ್, ಗಲಾಭೆಗಳು ನಡೆದ ಸಂದರ್ಭದಲ್ಲಿ ಶಾಂತಿ ಕಾಪಾಡಿಕೊಂಡು ಬರುವಲ್ಲಿ ಪೊಲೀಸರು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳು ವಿಶೇಷ ತರಬೇತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಪೊಲೀಸರಿಂದ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

    300x250 AD

    ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐಗಳಾದ ಬಿ.ಎಸ್.ಲೋಕಾಪುರ, ಸುರೇಶ್ ಶಿಂಗೆ, ಮಹಾಂತೇಶ ಹೊಸಪೇಟೆ ಹಾಗೂ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪಿಎಸೈಗಳು, ಎಎಸೈಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top