Slide
Slide
Slide
previous arrow
next arrow

ಸಂಸದ ಅನಂತಕುಮಾರ ಹೆಗಡೆ ಕೋರಿಕೆಗೆ ಅಸ್ತು ಎಂದ ರೈಲ್ವೆ ಇಲಾಖೆ: ಅಂಕೋಲಾ,ಭಟ್ಕಳದಲ್ಲಿ ರೈಲ್ವೆ ನಿಲುಗಡೆ

300x250 AD

ಭಟ್ಕಳ:  ಸಂಸದ ಅನಂತಕುಮಾರ ಹೆಗಡೆ ಕೋರಿಕೆಯಂತೆ  ಮಾರ್ಚ್ 09 ರಿಂದ ಜಿಲ್ಲೆಯ ಅಂಕೋಲಾದಲ್ಲಿ ಕೊಚುವೆಲಿ-ಮುಂಬೈ ರೈಲ್ವೆ ನಂ.12201/02 ಹಾಗೂ ಮಾರ್ಚ 10 ರಿಂದ ತಿರುವಂತನಪುರ-ಪನವೆಲ್ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲ್ವೆ ನಂ.16345/46 ರೈಲು ಭಟ್ಕಳದಲ್ಲಿ ನಿಲುಗಡೆಯಾಗಲಿದ್ದು, ಜನರ ಬಹು ದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆಯು ಈಡೇರಿಸಿದೆ.

ಈ ಹಿಂದೆ ಮಾನ್ಯ ಸಂಸದ ಅನಂತಕುಮಾರ ಹೆಗಡೆ ಜಿಲ್ಲೆಯ ಕರಾವಳಿ ಭಾಗದ ಜನರ ಅಪೇಕ್ಷೆಯ ಮೇರೆಗೆ ರೈಲ್ವೆ ನಿಲುಗಡೆಗೆ ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆದು ವಿನಂತಿಸಿದ್ದರು. ಜಿಲ್ಲೆಯ ಕರಾವಳಿ ಭಾಗದ ಜನರು ಉತ್ತರ ಭಾರತ ಹಾಗೂ ಕೇರಳಕ್ಕೆ ಪ್ರಯಾಣಿಸಲು ಈ ರೈಲುಗಳ ನಿಲುಗಡೆಯಿಂದ ತುಂಬಾ ಅನುಕೂಲವಾಗಲಿದೆ.
ಅದರಂತೆ ಬಹಳ ಜನರ ಬೇಡಿಕೆಯಾದ ಹಿಸ್ಸಾರ್-ಕೊಯಿಮತ್ತೂರು  ರೈಲ್ವೆ ನಂ.22475/76 ಈ ರೈಲಿಗೆ ಸದ್ಯದಲ್ಲಿ ಕುಮಟಾದಲ್ಲಿ ನಿಲುಗಡೆಯಾಗಲಿದೆ ಎಂದು‌ ತಿಳಿದುಬಂದಿದೆ.

300x250 AD
Share This
300x250 AD
300x250 AD
300x250 AD
Back to top