Slide
Slide
Slide
previous arrow
next arrow

ವಿಶಿಷ್ಟವಾಗಿ‌ ನೆರವೇರಿದ ವೈದ್ಯಕೀಯ ಪ್ರತಿನಿಧಿಗಳ ಸಂಘದ ಸ್ನೇಹಕೂಟ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘದ ಸ್ನೇಹಕೂಟವು ರೋಟರಿ ಸಭಾಭವನದಲ್ಲಿ ಜರುಗಿತು. ಸಂಘವು ಸ್ನೇಹಕೂಟವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಮೂಲಕ ನೆರೆದಿದ್ದ ಗಣ್ಯರಿಗೆ ಮತ್ತು ಸದಸ್ಯರ ಗಮನವನ್ನು ಸೆಳೆಯಿತು.
ಸ್ನೇಹಕೂಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು, ವಿಶೇಷ ಸಾಧನೆ ಮಾಡಿದ ವೈದ್ಯಕೀಯ ಪ್ರತಿನಿಧಿಗಳಾದ ಸದಾನಂದ ನಾಯ್ಕ್, ಪ್ರಶಾಂತ ನಾಯ್ಕ್, ವಿವೇಕ್ ಪೂಜಾರಿ, ಪ್ರತಾಪ್ ಕಬ್ಬರ್ ಮತ್ತು ನವೀನ್ ಗೌಡ ಅವರಿಗೆ ಗಣ್ಯರು ಸನ್ಮಾನಿಸಿ, ಶುಭ ಕೋರಿದರು. ಸಂಘದ ಸದಸ್ಯರ ಐಡಿ ಕಾರ್ಡನ್ನು ಸರೋಜ ಫಾರ್ಮದ ಮಾಲಕರು ಹಾಗೂ ರೋಟರಿಯನ್ ಬಾಬುಲಾಲ್ ಚೌದರಿ ಮತ್ತು ಹೆಗಡೆ ಬ್ರದರ್ಸ್ ಮಾಲಕರು ಹಾಗೂ ರೋಟರಿಯನ್ ಶ್ರೀಧರ್ ಹೆಗಡೆ ಜಂಟಿಯಾಗಿ, ಗಣ್ಯರೊಂದಿಗೆ ಸೇರಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಕಪಿಲಾ ಫಾರ್ಮದ ರಾಜೇಂದ್ರ ಹೆಗಡೆ, ಕಪಿಲಾ ಮೆಡಿಕಲ್ ಏಜೆನ್ಸಿಯ ಚಂದ್ರಶೇಖರ ಹೆಗಡೆ, ಡೋನ್ನಾ ಅಸೋಸಿಯೇಟ್ಸ್ ಮಾಲಕ ವಿನ್ಸೆಂಟ್ ಡಿಸೋಜ ಮತ್ತು ಅನಿಲ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತೋಷ ನಾಯ್ಕ್ ವಹಿಸಿದ್ದರು. ಪ್ರಸನ್ನ ಸೋನಾಪುರ ಮತ್ತು ರವಿ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಫಾರ್ಮ ಕಂಪನಿಯ ಮ್ಯಾನೇಜರ್ ಹಾಗೂ ಸಂಘದ ವಿವಿಧ ಸ್ಥರದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top