Slide
Slide
Slide
previous arrow
next arrow

ಆಸ್ಪತ್ರೆಯ ಯಂತ್ರೋಪಕರಣಗಳಿಗಾಗಿ ರೂ.25 ಲಕ್ಷ ಮಂಜೂರಿ

300x250 AD

ಸಿದ್ದಾಪುರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿಶೇಷ ಪ್ರಯತ್ನದಿಂದ ಹಾಗೂ ಶಿಫಾರಸ್ಸಿನ ಮೇರೆಗೆ ಬಿಇಎಲ್ ನಿಗಮದಿಂದ ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಸಾರ್ವಜನಿಕರಿಗೆ ಅತೀ ಅವಶ್ಯಕವಾಗಿರುವಂತಹ ಯಂತ್ರೋಪಕರಣಗಳಿಗಾಗಿ ರೂ.25 ಲಕ್ಷಗಳ ಅನುದಾನ ಮಂಜೂರಿಯಾಗಿದೆ.
ಬಿ.ಸಿ.ಎ.-ಸ್ವಯಂಚಾಲಿತ ರಕ್ತಪರೀಕ್ಷೆ ಯಂತ್ರ- ಇದು ರಕ್ತದಲ್ಲಿನ ಕೊಬ್ಬು ಪರೀಕ್ಷೆ ಮೊದಲಾದವುಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ,ಎ,ಎಮ್.-ಸಂಪೂರ್ಣ ಸ್ವಯಂ ಚಾಲಿತ ಅರವಳಿಕೆಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಉಪಯೋಗಿಸುವ ಯಂತ್ರ:ಇದು ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಉಪಯೋಗಿಸಲಾಗುತ್ತದೆ,ಎನ್. ಎಮ್.-ಭ್ರೂಣದ ಹೃದಯ ಬಡಿತವನ್ನು ಒತ್ತಡ ರಹಿತವಾಗಿ ಪರಿಶೀಲಿಸುವ ಯಂತ್ರ:ಇದು ಗರ್ಭಿಣಿಯರ ಪರೀಕ್ಷೆಗೆ ಅತ್ಯುಪಯುಕ್ತವಾಗಿದೆ.ಸದರಿ ಯಂತ್ರಗಳಿಗೆ ಅನುದಾನ ಮಂಜೂರಿ ಮಾಡಲು ಸಹಕರಿಸಿದ ಬಿಇಎಲ್ ನಿಗಮದವರಿಗೆ ಸಭಾಧ್ಯಕ್ಷರು ಧನ್ಯವಾದಗಳನ್ನು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top