• Slide
    Slide
    Slide
    previous arrow
    next arrow
  • ಮಾ.5ಕ್ಕೆ ಯೋಗ ಮಂದಿರದ 26ನೇ ವಾರ್ಷಿಕೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮ

    300x250 AD

    ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಸರ್ವಜ್ನೇಂದ್ರ ಸರಸ್ವತೀ ಪ್ರತಿಷ್ಠಾನ ನಡೆಸುವ ಯೋಗ ಮಂದಿರದ 26ನೇ ವರ್ಷದ ವಾರ್ಷಿಕೋತ್ಸವ ಮಾರ್ಚ 5 ರಂದು ನಡೆಯಲಿದೆ.
    ಅಂದು‌ ಮುಂಜಾನೆ 8 ರಿಂದ ರುದ್ರ ಹವನ, ಸಾಮೂಹಿಕ ಗಣಹವನ, ಶತರುದ್ರ, ಸಾಮೂಹಿಕ ಕುಂಕುಮಾರ್ಚನೆಗಳು, ಶ್ರೀಗಳ ಭಿಕ್ಷಾ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.
    ಮಧ್ಯಾಹ್ನ 3.30ರಿಂದ ಸಭಾ ಕಾರ್ಯಕ್ರಮ‌ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿದ್ಧು, ಅತಿಥಿಗಳಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಲಿದ್ದಾರೆ. ಮಠದ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ, ಸರ್ವಜ್ನೇಂದ್ರ ಪ್ರತಿಷ್ಠಾನದ ಉಪಾಧ್ಯಕ್ಷ ನಾರಾಯಣ ಭಟ್ ಬಳ್ಳಿ, ಮಾತೃ ಮಂಡಳಿಯ ಗೀತಾ ಹೆಗಡೆ ಉಪಸ್ಥಿತರಿರಲಿದ್ದಾರೆ.
    ಇದೇ ವೇಳೆ ನಿವೃತ್ತ ಬಿಇಓ ಲಕ್ಷ್ಮೀನಾರಾಯಣ ಶಾಸ್ತ್ರೀ, ಹಿರಿಯ ಸಾಹಿತಿ ಎಲ್‌.ಆರ್.ಭಟ್ಟ ತೆಪ್ಪ, ಸಹಕಾರಿ ರತ್ನ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರನ್ನು ಸಮ್ಮಾನಿಸಲಾಗುತ್ತಿದೆ.
    ಯೋಗ ಮಂದಿರದ ಮೊದಲ ‌ಮಹಡಿ ಉದ್ಘಾಟನೆ ಹಾಗೂ ಸ್ಪರ್ಧಾಳುಗಳಿಗೆ ಶ್ರೀಗಳು ಬಹುಮಾನ ವಿತರಣೆ‌ ಕೂಡ ವಿತರಿಸಲಿದ್ದಾರೆ. ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಮಾ.4ರ ಇಳಿಹೊತ್ತಿನಲ್ಲಿ ಯೋಗ ಮಂದಿರಕ್ಕೆ ಆಗಮಿಸಲಿದ್ದಾರೆ ಎಂದು ಯೋಗ ಮಂದಿರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top