Slide
Slide
Slide
previous arrow
next arrow

ಡ್ರ‍್ಯಾಗನ್ ಬೋಟ್ ಚಾಂಪಿಯನ್ ಶಿಪ್ ಗೆದ್ದ ಕರ್ನಾಟಕ ತಂಡದಲ್ಲಿ ಕಾರವಾರದ ಕ್ರೀಡಾಪಟು

300x250 AD

ಕಾರವಾರ: 11ನೇಯ ರಾಷ್ಟ್ರೀಯ ಡ್ರ‍್ಯಾಗನ್ ಬೋಟ್ ಚಾಂಪಿಯನ್ ಶಿಪ್’ನಲ್ಲಿ ಕರ್ನಾಟಕ ರಾಜ್ಯ ತಂಡ ಪ್ರಥಮ ಸ್ಥಾನ ಪಡೆದಿದ್ದು, ನಗರದ ಭೂಮಿಕಾ ಪ್ರಕಾಶ ಹರಿಕಂತ್ರ ಕೂಡ ಈ ತಂಡದಲ್ಲಿದ್ದಳು.
ಭೂಮಿಕಾ ನಗರದ ದಿವೇಕರ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ. ಉಡುಪಿ ಉಪ್ಪೂರು ಮಡಿಸಾಲು ನದಿಯಲ್ಲಿ ನಡೆದ 11ನೇ ರಾಷ್ಟ್ರೀಯ ಡ್ರ‍್ಯಾಗನ್ ಬೋಟ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ತಂಡದಿAದ ಭಾಗವಹಿಸಿ ಸಾಹಸ ಮೆರೆದಿದ್ದು, ಕರ್ನಾಟಕ ರಾಜ್ಯ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿತು.
ದೇಶದ 16 ರಾಜ್ಯದಿಂದ 700 ಕ್ರೀಡಾಪಟುಗಳು ಈ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ತಂಡದ 10 ಸ್ಪರ್ಧಾಳುಗಳ ಪೈಕಿ ಭೂಮಿಕಾ ಕೂಡ ಒಬ್ಬರಾಗಿದ್ದು, ಅವರ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ.ಕೇಶವ ಕೆ.ಜಿ., ಪ.ಪೂ.ಕಾಲೇಜಿನ ಪ್ರಾಂಶುಪಾಲ ಲಲಿತಾ ಶೆಟ್ಟಿ, ಪ್ರಾಧ್ಯಾಪಕ ವರ್ಗ ಹಾಗೂ ಸಿಬ್ಬಂದಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top