• Slide
    Slide
    Slide
    previous arrow
    next arrow
  • ಪಂಕ್ಚರ್ ತೆಗೆಯುತ್ತಿದ್ದವರ ಮೇಲೆ ಹರಿದ ಲಾರಿ: ಓರ್ವನ ದುರ್ಮರಣ, ಆರೋಪಿ ಪರಾರಿ

    300x250 AD

    ಅಂಕೋಲಾ : ಟಯರ್ ಪಂಕ್ಚರ್ ಆಗಿದ್ದ ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ದುರಸ್ಥಿ ಕಾರ್ಯ ನಡೆಸುತ್ತಿದ್ದಾಗ, ವೇಗವಾಗಿ ಬಂದ ಇನ್ನೊಂದು ಟ್ಯಾಂಕರ್ ಲಾರಿಯ ಚಕ್ರಗಳು ರಸ್ತೆಯಂಚಿನಲ್ಲಿ ಪಂಕ್ಚರ್ ತೆಗೆಯುತ್ತಿದ್ದ ಲಾರಿ ಕ್ಲೀನರ್ ನ ಮೇಲೆ ಹಾದು ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾ.ಹೆ. 63 ರ ಯಲ್ಲಾಪುರ ಅಂಕೋಲಾ ಮಾರ್ಗಮಧ್ಯೆ ಸುಂಕಸಾಳ ವಜ್ರಳ್ಳಿ ಕಳಸದಮಕ್ಕಿ ಬಳಿ ನಡುರಾತ್ರಿ 1.30 ರ ಸುಮಾರಿಗೆ ನಡೆದಿದೆ.

    ಘಟನೆಯಿಂದ ಲಾರಿ ಕ್ಲೀನರ್ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಪಕ್ಕದಲ್ಲಿಯೇ ಇದ್ದ ಲಾರಿ ಮಾಲಿಕನಿಗೂ ಲಾರಿ ಡಿಕ್ಕಿಯಾಗಿ ಆತನ ಕಾಲಿಗೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಾವೇರಿ ರಾಣೇಬೆನ್ನೂರು ಮೂಲದ ಬಸವರಾಜ (22 ) ಮೃತ ದುರ್ದೈವಿಯಾಗಿದ್ದಾನೆ. ಹಾವೇರಿಯಿಂದ ಸಿಮೆಂಟ್ ಶೀಟ್ ಗಳನ್ನು ಗೋವಾ ಕಡೆ ಸಾಗಿಸುತ್ತಿದ್ದ ಲಾರಿ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿತ್ತು ಎನ್ನಲಾಗಿದೆ.

    300x250 AD

    ಅಪಘಾತ ಪಡಿಸಿದ ಟ್ಯಾಂಕರ್ ಲಾರಿ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top