• Slide
    Slide
    Slide
    previous arrow
    next arrow
  • ಗಮನ ಸೆಳೆದ ಕದಂಬೋತ್ಸವದ ಭವ್ಯ ಮೆರವಣಿಗೆ

    300x250 AD

    ಶಿರಸಿ: ಬನವಾಸಿಯ ಕದಂಬೋತ್ಸವ ಅಂಗವಾಗಿ ನಡೆದ ಭವ್ಯ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
    ಸಚಿವ ಶಿವರಾತ್ರಿಯ ಹೆಬ್ಬಾರ್ ಮೆರವಣಿಗಗೆ ಚಾಲನೆ ನೀಡಿದರು. ಮಧುಕೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ 20ಕ್ಕೂ ಹೆಚ್ಚು ಕಲಾ ತಂಡಗಳು, 17 ರೂಪಕಗಳು ಸೇರಿದಂತೆ 50 ತಂಡಗಳು ಪಾಲ್ಗೊಂಡಿದ್ದವು.
    ಬನವಾಸಿ ಹೋಬಳಿ, ಶಿರಸಿ ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು ಮೆರವಣಿಗೆಗೆ ಮೆರಗು ತಂದರು. ಡೊಳ್ಳು, ಚೆಂಡೆ, ತಮಟೆ ವಾದ್ಯ, ಸಿದ್ದಿ- ಕುಣಬಿ ನೃತ್ಯ, ವೀರಗಾಸೆ, ಮಂಗಳ ವಾದ್ಯಗಳನ್ನೊಳಗೊಂಡ ಸುಮಾರು ಎರಡು ಕಿಲೋ ಮೀಟರ್ ಉದ್ದದ ಮೆರವಣಿಗೆ ದೇವಸ್ಥಾನದಿಂದ ಹೊರಟು ಕದಂಬ ಸರ್ಕಲ್‌ಗೆ ತೆರಳಿ ಅಲ್ಲಿಂದ ಪುನಃ ಬಂದು ಮಯೂರವರ್ಮ ವೇದಿಕೆಯಲ್ಲಿ ಸಮಾಪ್ತಿಗೊಂಡಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top