• Slide
    Slide
    Slide
    previous arrow
    next arrow
  • ಫೆ.28ಕ್ಕೆ ಕದಂಬೋತ್ಸವ ಶೋಭಾಯಾತ್ರೆ: ಪ್ರತಿಷ್ಠಿತ ಕಲಾತಂಡಗಳು ಭಾಗಿ

    300x250 AD

    ಶಿರಸಿ: ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ ಎರಡು ದಿನಗಳ ಕದಂಬೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

    ಫೆ. 28ರಂದು ಕದಂಬೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು‌  ಮಧ್ಯಾಹ್ನ 1 ಗಂಟೆಗೆ ಶ್ರೀ ಮಧುಕೇಶ್ವರ ದೇವಾಲಯ ಎದುರಿನಿಂದ ಶೋಭಾಯಾತ್ರೆ ಪ್ರಾರಂಭವಾಗಲಿದೆ.

    300x250 AD

    ಶೋಭಾಯಾತ್ರೆಯ ಉದ್ಘಾಟನೆಯನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ನೆರವೇರಿಸಲಿದ್ದು,  ಶೋಭಾಯಾತ್ರೆಯಲ್ಲಿ ರಾಜ್ಯದ ಪ್ರತಿಷ್ಠಿತ ಕಲಾತಂಡಗಳು ಸೇರಿ‌ ಒಟ್ಟೂ 20 ಕಲಾತಂಡಗಳು ಭಾಗವಹಿಸಲಿದೆ. ಜೊತೆಯಲ್ಲಿ 9 ರೂಪಕಗಳು ಭಾಗವಹಿಸಲಿದ್ದು,ಒಟ್ಟಾರೆ ವಿಶಿಷ್ಟ ಮಾದರಿಯಲ್ಲಿ ಜರುಗಲಿದೆ. ಜನಪ್ರತಿನಿಧಿಗಳು, ನಾಗರಿಕರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಸದಸ್ಯ ಕಾರ್ಯದರ್ಶಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top