Slide
Slide
Slide
previous arrow
next arrow

ಭೈರುಂಬೆಯಲ್ಲಿ ಗಮನ ಸೆಳೆದ ‘ಪಾರ್ಥಸಾರಥ್ಯ’

300x250 AD

ಶಿರಸಿ: ತಾಲೂಕಿನ ಭೈರುಂಬೆಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆದ ‘ಪಾರ್ಥ ಸಾರಥ್ಯ’ ತಾಳಮದ್ದಲೆ ಗಮನ ಸೆಳೆಯಿತು.
ಸೋಂದಾ ಶಬರ ಸಂಸ್ಥೆಯ ಆಶ್ರಯದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದವರಿಂದ ನಡೆದ ಸಮಯ ಮಿತಿ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕೃಷ್ಣ ಹೆಗಡೆ ಕನಕನಳ್ಳಿ ಮುದ್ದಳೆ ವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಸಹಕಾರ ನೀಡಿದರು. ಅರ್ಥಧಾರಿಗಳಾಗಿ ವಿದ್ಯಾ ವಾಚಸ್ಪತಿ ವಿ. ಉಮಾಕಾಂತ ಭಟ್ಟ ಕೆರೆಕೈ ಉಜಿರೆ ಅಶೋಕ ಭಟ್ಟ,ಎಂ.ಎನ್.ಹೆಗಡೆ ಹಳವಳ್ಳಿ ಪಾಲ್ಗೊಂಡರು‌. ಸುರೇಶ ಹಕ್ಕಿಮನೆ ಸ್ವಾಗತಿಸಿದರು. ಸೋಂದಾ ನಾಗರಾಜ ಜೋಶಿ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಹುಳಗೋಳ ಸೇವಾ ಸಹಕಾರಿ ಸಂಘ, ಭೈರುಂಬೆ ಗೆಳೆಯರ ಬಳಗ ಸಹಕಾರ ನೀಡಿತ್ತು.

300x250 AD
Share This
300x250 AD
300x250 AD
300x250 AD
Back to top