Slide
Slide
Slide
previous arrow
next arrow

ಬಹುಮುಖ ಪ್ರತಿಭೆಯ ಸೋಮು ಗೌಡಗೆ ಸನ್ಮಾನ

300x250 AD

ಅಂಕೋಲಾ: ಬಹುಮುಖ ಪ್ರತಿಭೆಯ ದೊಳೆಮನೆ ಸೋಮು ಗೌಡ ಅವರನ್ನು ಅಚವೆಯ ದುರ್ಗಾಂಬಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ವತಿಯಿಂದ ನಡೆದ ‘ಹಾಲಕ್ಕಿ ಕಪ್’ ಕ್ರಿಕೆಟ್ ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಕೋಲಾ ತಾಲೂಕಿನ ತಹಶಿಲ್ದಾರ ಸತೀಶ್ ಗೌಡ ಸನ್ಮಾನಿಸಿದರು.
ಮೂಲತಃ ಬೆಳಂಬಾರ ಮೂಲದವರಾದ ಸೋಮು ಗೌಡ ಕೃಷಿಯ ಎಲ್ಲ ಪರಿಕರಗಳನ್ನು ಅದೆಷ್ಟೋ ವರ್ಷದಿಂದ ಮಾಡುತ್ತ ಬಂದಿದ್ದಾರೆ. ಕೂಗಲಬಳ್ಳಿ, ಬೆತ್ತದ ಬೇರೆ ಬೇರೆ ತರದ ಬುಟ್ಟಿಗಳನ್ನು, ಬಾಳೆ ಹಂಬೆ ಕಟ್ಟಿ ಡೆಕೊರೇಟ್ ಮಾಡುವ ಕಲೆ, ಕಟ್ಟಡ ಕಟ್ಟುವ ಗಾವಂಡಿ ಕೆಲಸವೂ ಇವರಿಗೆ ಕರಗತವಾಗಿದೆ. ಕೊಳಲು, ಶೆಹನಾಯಿ ವಾಲಗ ಊದುವ ಇವರು ಬೆಳಂಬಾರ ಸುಗ್ಗಿಯ ಬಗ್ಗೆ ಅದರ ವಿಶಿಷ್ಟತೆಗಳ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ.

300x250 AD
Share This
300x250 AD
300x250 AD
300x250 AD
Back to top