Slide
Slide
Slide
previous arrow
next arrow

ಕನ್ನಡ ಭವನ, ಪತ್ರಿಕಾ ಭವನ ನಿರ್ಮಾಣ ಮನವಿ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ

300x250 AD

ಹೊನ್ನಾವರ: ತಾಲೂಕಿಗೆ ಪಂಚರತ್ನ ರಥ ಯಾತ್ರೆ ಮೂಲಕ ಹೊನ್ನಾವರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕನ್ನಡದ ಶಾಲು ಹಾಕಿ ಸ್ವಾಗತಿಸಿದ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುನಾಥ್ ಗೌಡ ಹೊನ್ನಾವರದಲ್ಲಿ ಕನ್ನಡ ಭವನ ಮತ್ತು ಪತ್ರಿಕಾ ಭವನ ನಿರ್ಮಿಸುವಂತೆ ಮನವಿ ಮಾಡಿಕೊಂಡರು.
ಈ ಮನವಿಗೆ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ,  ಈ ಹಿಂದೆ ಸಿರ್ಸಿಯಲ್ಲಿ ನಮ್ಮ ಅವಧಿಯಲ್ಲಿ ಪತ್ರಿಕಾ ಭವನವನ್ನು ನಿರ್ಮಿಸಿದ್ದೇವೆ. ಮುಂದಿನ ಬಾರಿ ಮುಖ್ಯಮಂತ್ರಿಯಾದರೆ ಹೊನ್ನಾವರದಲ್ಲಿ ಪತ್ರಿಕಾ ಭವನ ಮತ್ತು ಕನ್ನಡ ಭವನವನ್ನು ನಿರ್ಮಿಸಿ ಕೊಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಕರವೇ ಅಧ್ಯಕ್ಷ ಮಂಜುನಾಥ ಗೌಡ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top