Slide
Slide
Slide
previous arrow
next arrow

ಫೆ. 4ಕ್ಕೆ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

300x250 AD

ಶಿರಸಿ: ಸಮಾಜದ ಉನ್ನತ ಪ್ರಗತಿ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕು ಹಾಗೂ ಶಿಕ್ಷಣದ ಕ್ಷೇತ್ರಗಳಲ್ಲಿ ಹಾಗೂ ಸಮಾಜಕ್ಕೆ ಅವಶ್ಯ ಇರುವ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ  ಉದ್ದೇಶದಿಂದ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು ಇದರ ಉದ್ಘಾಟನಾ ಸಮಾರಂಭವನ್ನು ಫೆಬ್ರುವರಿ 4, ಶನಿವಾರ  ಬೆಳಿಗ್ಗೆ 10.30 ಕ್ಕೆ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ. 

ಕಾರ್ಯಕ್ರಮದ‌ ಉದ್ಘಾಟಕರಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಟಿಎಸ್ಎಸ್ ಆಸ್ಪತ್ರೆಯ‌ ಎಲಬು ಮತ್ತು ಕೀಲು ತಜ್ಞ ಗೌತಮ್ ಶೇಟ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೆ.ಎಂ.ಎಫ್. ಹಾಗೂ ಕೆ.ಡಿ.ಸಿ.ಸಿ.,ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ, ಉಪನಿರ್ದೇಶಕ‌ ಪಾರಿ ಬಸವರಾಜ್,‌ರೋಟರಿ ಚಾರಿಟೇಬಲ್‌ ಆಸ್ಪತ್ರೆ, ಅಧ್ಯಕ್ಷ‌‌ ಲಕ್ಷ್ಮಿದಾಸ್ ಕಾಸರಗೋಡ, ಕ್ಷೇತ್ರ ಶಿಕ್ಷಣಾಧಿಕಾರಿ‌ ಎಂ.ಎಸ್.ಹೆಗಡೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಹಾಯ ಟ್ರಸ್ಟ್, ಅಧ್ಯಕ್ಷ ಸತೀಶ ರಾಮ ಶೆಟ್ಟಿ ಹಾಗೂ ಸುಯೋಗ ಫೌಂಡೇಶನ್ ಅಧ್ಯಕ್ಷೆ ಲತಿಕಾ ಭಟ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು
ಹಾಗೂ ತಾಲೂಕಿನ ವಿವಿಧ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top