Slide
Slide
Slide
previous arrow
next arrow

ಒಡೆದ ಮನಸ್ಸುಗಳನ್ನು ಬೆಸೆಯುವಲ್ಲಿ ಭಾರತ್ ಜೋಡೋ ಯಶಸ್ವಿ: ಜಗದೀಪ್ ತೆಂಗೇರಿ

300x250 AD

ಹೊನ್ನಾವರ: ಕಳೆದ ಎಂಟು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೋದಿ ಸರಕಾರ ದೇಶದಲ್ಲಿ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸಿ, ಪರಸ್ಪರರಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ದೇಶದಲ್ಲಿ ಒಡೆದ ಮನಸ್ಸುಗಳನ್ನು ಪುನಃ ಬೆಸೆಯುವಲ್ಲಿ ಯಶಸ್ವಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಹೇಳಿದರು.
ಅವರು ಬ್ಲಾಕ್ ಕಾಂಗ್ರೆಸ್ ಸಮಿತಿ, ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಹುತಾತ್ಮರ ದಿನಾಚರಣೆಯ ಸಭೆಯಲ್ಲಿ ಮನವತಾವಾದಿ, ಶಾಂತಿದೂತ ಮಹಾತ್ಮಾಗಾಂಧಿಯವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ, ನೆರೆದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಹುಲ್ ಗಾಂಧಿಯವರು ಮಳೆ, ಗಾಳಿ, ಚಳಿ ಯಾವುದನ್ನು ಲೆಕ್ಕಿಸದೇ, ಪ್ರಾಣದ ಹಂಗನ್ನು ತೊರೆದು ಕಳೆದ ಸೆಪ್ಟೆಂಬರ್ 7ರಿಂದ ತಮಿಳುನಾಡಿನ ಪೆರಂಬದೂರಿನಿoದ ಆರಂಭಿಸಿದ ಪಾದಯಾತ್ರೆ ಸತತ ಐದು ತಿಂಗಳು ನಢೆದಿದ್ದು, ಇದು ರಾಹುಲ್‌ಗಾಂಧಿಯವರ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ದೇಶದಐಕ್ಯತೆ, ಸಮಗ್ರತೆ ಮತ್ತು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಮೂಡಿಸಿ, ದ್ವೇಷದ ಬಾವನೆಯನ್ನು ಕೊನೆಗಾಣಿಸಲು, ದೇಶದ ಹನ್ನೆರಡು ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮೂಲಕ ಕಾಶ್ಮೀರ ರಾಜ್ಯವನ್ನು ತಲುಪಿ, ಸುಮಾರು 3,570 ಕಿ.ಮೀ.ಕಾಲ್ನಡಿಗೆಯಲ್ಲಿ ಕ್ರಮಿಸಿದ ಶ್ರೇಯಸ್ಸು ರಾಹುಲ್ ಗಾಂಧಿಯವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ ಕಡ್ತೋಕಾ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಯುವಕರಲ್ಲಿ ಅನೇಕ ಭರವಸೆಗಳನ್ನು ಬಿತ್ತಿ ಅಧಿಕಾರಕ್ಕೆ ಬಂದರು. ಆದರೆ ಬರವಸೆಗಳು ಬರವಸೆಯಾಗಿಯೇ ಉಳಿಯಿತು ಬಿಟ್ಟರೆ ಇದುವರೆಗೂ ಒಂದನ್ನು ಈಡೇರಿಸಿಲ್ಲಾ. ಯುವಕರಿಗೆ ಪ್ರತಿ ವರುಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಯಾವುದನ್ನು ಈಡೇರಿಸದೆ ಸರಕಾರಿ ಸ್ವಾಮ್ಯದ ಎಲ್ಲಾ ಉದ್ಯಮಗಳನ್ನು ಖಾಸಗಿಯವರಿಗೆ ಮಾರುತ್ತಿರುವುದನ್ನು ಕಂಡರೆ ಮುಂದೊoದು ದಿನ ದೇಶವನ್ನು ಮಾರುವುದರಲ್ಲಿ ಸಂಶಯವಿಲ್ಲಾ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿಯವರ ಭಾರತ ಜೋಡೋ ಯಶಸ್ಸು ದೇಶದ ಯುವಕರಿಗೆ ಸಲ್ಲುತ್ತದೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಡಾ.ವಿಷ್ಣು ಸಭಾಹಿತ್ ಮಾತನಾಡುತ್ತಾ, ಸಾವಿರಾರು ಕೋಟಿ ರೂಪಾಯಿ ವೈಭವಯುತವಾದ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಾ, ಮೈ ಮೇಲೆ ಕೋಟ್ಯಾಂತರ ರೂಪಾಯಿ ಬಟ್ಟೆಗಳನ್ನು ಧರಿಸುವ ಪ್ರಧಾನಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅಣಕಿಸಿದರು. ಕೇವಲ ಸುಳ್ಳು ಬರವಸೆಗಳನ್ನು ನೀಡಿ,ಜನರ ಬಾವನೆಗಳನ್ನು ಕೆರಳಿಸಿ ಮತ ಪಡೆಯುವುದೊಂದೆ ಇವರ ಕುತoತ್ರವಾಗಿದೆ ಎoದರು. ತನ್ನ ತಂದೆ ರಾಜೀವಗಾoಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ತನ್ನ ಕಣ್ಣೆದುರೆ ಹಂತಕರ ಕುಕೃತ್ಯಕ್ಕೆ ಬಲಿಯಾಗಿದ್ದರು. ಅದನ್ನು ಲೆಕ್ಕಿಸದೇ ದೇಶದ ಒಳಿತಿಗಾಗಿ ಬಾರತ್ ಜೋಡೋ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ರಾಹುಲ್ ಗಾಂಧಿಯವರ ದಿಟ್ಟತನವನ್ನು ಡಾ.ಸಭಾಹಿತ್ ಕೊಂಡಾಡಿದರು.
ಸಭೆಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಎಮ್.ಎನ್.ಸುಬ್ರಮಣ್ಯ, ಜಿಲ್ಲಾ ರಾಜೀವ ಗಾಂಧಿ ಗ್ರಾಮೀಣಾಭಿವೃಧ್ಧಿ ಸಂಘಟನೆಯ ಅಧ್ಯಕ್ಷ ವಿನೋದ ನಾಯ್ಕ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಕ್ರಿಯ್ಯಾ ಶೇಖ್, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಜಿಲ್ಲಾ ಇಂಟೆಕ್ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಜಿಲ್ಲಾ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಪಕ್ಷದ ಪ್ರಮುಖ ಮುಖಂಡರಾದ ಮಂಜುನಾಥ ಮುಕ್ರಿ, ಮನ್ಸೂರ್ ಶೇಖ, ಶಂಕರ ಮೇಸ್ತ, ಬ್ರಾಝಿಲ್ ಪಿಂಟೊ, ಮಂಜು ಖಾರ್ವಿ, ಪಾತ್ರೊನ್ ಫರ್ನಾಂಡಿಸ್, ಹನೀಪ್ ಶೇಖ ಇನ್ನೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top