Slide
Slide
Slide
previous arrow
next arrow

ಜ.22ಕ್ಕೆ ಶಿವಕುಮಾರ ಮಹಾಶಿವಯೋಗಿಗಳ 4ನೇ ಪುಣ್ಯಸ್ಮರಣೆ

300x250 AD

ಶಿರಸಿ: ನಾರಾಯಣಗುರು ನಗರ, ಚಿಪಗಿಯ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಸೇವಾ ಸಮಿತಿ ಇವರ ವತಿಯಿಂದ ತ್ರಿವಿಧ ದಾಸೋಹಿ ವಿಶ್ವರತ್ನ ಶತಾಯುಷಿ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 4ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ರುದ್ರದೇವರ ಮಠದ ಮು.ನಿ. ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು ಇವರ ಸಾನಿಧ್ಯದಲ್ಲಿ ರಕ್ತದಾನ, ನೇತ್ರದಾನ ಜಾಗೃತಿ ಅಭಿಯಾನ, ದಾಸೋಹ ಕಾರ್ಯಕ್ರಮವನ್ನು ಜ. 22, ಭಾನುವಾರ ಬೆಳಿಗ್ಗೆ 10 ಘಂಟೆಗೆ ಸಿಂಪಿಗಲ್ಲಿಯ ಶ್ರೀ ರುದ್ರದೇವರ ಮಠ, ಶಿಮುಶ ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಪಿ.ಎಸ್.ಐ. ರಾಜಕುಮಾರ ಎಸ್. ಉಕ್ಕಲೆ ಮತ್ತು ಅತಿಥಿಗಳಾಗಿ ಸಮಾಜ ಸೇವಕರು ಗಜಾನನ ಗೌಡ್ರು ಬಾಶಿ, ಮಹಿಳಾ ಸಾಂತ್ವನ ವೇದಿಕೆ ಕಾನೂನು ಸಲಹೆಗಾರ್ತಿ ಶ್ರೀಮತಿ ಪ್ಲೇವಿಯಾ ಜಗದೀಶ, ಖ್ಯಾತ ನೇತ್ರ ತಜ್ಞ ಡಾ. ಶಿವರಾಮ ಕೆ.ವಿ. ಡಾ. ಸುಮನ್ ಹೆಗಡೆ, ಗ್ರೀನ್ ಕೇರ್, ಜಿ.ಕೆ. ಫಾರ್ಮ, ಕಾರ್ಯದರ್ಶಿ ಜಿತೇಂದ್ರಕುಮಾರ ತೊನ್ಸೆ ಇವರುಗಳು ಆಗಮಿಸಲಿದ್ದಾರೆ. ಅತಿಥಿಗಳಿಂದ ರಕ್ತದಾನ ಮತ್ತು ನೇತ್ರದಾನದ ಮಾಹಿತಿ, ರಕ್ತದಾನದ ಕಾರ್ಯಕ್ರಮ, ನೇತ್ರದಾನದ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.
ಸಹೃದಯ ಸದ್ಬಕ್ತರು, ತನುಮನ ಧನಗಳಿಂದ ಸೇವೆಸಲ್ಲಿಸಿ ಎಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಿ ಶ್ರೀಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top