Slide
Slide
Slide
previous arrow
next arrow

ಜ.29ರಿಂದ ಮಂಜುಗುಣಿಯಲ್ಲಿ ಧಾರ್ಮಿಕ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಮಂಜುಗುಣಿಯ ವೆಂಕಟರಮಣ ದೇವಾಲಯದಲ್ಲಿ ಜ.29 ಮತ್ತು 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ. 29ರಂದು ಬೆಳಗ್ಗೆ 7.30ಕ್ಕೆ ದೇವಸ್ಥಾನದಿಂದ ಮಂಗಲಮೂರ್ತಿ ಪ್ರಾಮರ್ಭಾವ ಹೊಂದಿದ ಗಿಳಲಗುಂಡಿಯವರೆಗೆ ಮೌನಯಾತ್ರೆ, 9.30ರಿಂದ ಗಿಳಲಗುಂಡಿಯಲ್ಲಿ ಶ್ರೀದೇವರಿಗೆ ಹಾಗೂ ಉದ್ಭವ ಸಥಾನದಲ್ಲಿರುವ ಗೋಪಾದ, ಮುನಿಪಾದ ಚಿಹ್ನೆಗೆ ಪೂಜೆ, ತಿರುಮಲ ಯೋಗಿಗಳ ತಪೋಗುಹೆಯಲ್ಲಿ ಗುರುಪಾದುಕಾ ಪೂಜೆ, 10.30ರಿಂದ ಶ್ರೀದೇವರಿಗೆ ಕಲ್ಪೋಕ್ತ ಸತ್ಯನಾರಾಯಣ ಪೂಜೆ ಆರಂಭ, 11.45ಕ್ಕೆ ಮಹಾಮಂಗಳಾರತಿ, ಕಥಾಶ್ರವಣ, ತೀರ್ಥಪ್ರಸಾದ ವಿತರಣೆ, ಮಹಾಪ್ರಸಾದ ಭೋಜನ, ಸಂಜೆ 4 ಗಂಟೆಗೆ ಅಲ್ಲಿಂದ ಮಂಜುಗುಣಿಗೆ ಅಶ್ವರಥೋತ್ಸವ ನಡೆಯಲಿದೆ.
ಜ.30ರಂದು ಮಂಜುಗುಣಿಯ ವೆಂಕಟರಮಣ ದೇವಾಲಯದ ಆವಾರದಲ್ಲಿ ಬೆಳಗ್ಗೆ 10 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ವ್ರತ ಕಥಾ ಪೂಜೆ, 1 ಗಂಟೆಗೆ ತೀರ್ಥ ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ಚಕ್ರತೀರ್ಥ ಕೆರೆಯಲ್ಲಿ ಭೂಸಹಿತನಾದ ವೆಂಕಟರಮಣ ದೇವರ ನೌಕಾಯಾನೋತ್ಸವ, ಅಶ್ವರಥೋತ್ಸವ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9379062433, 82777226708, 8277419657 ಸಂಪರ್ಕಿಸಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top