Slide
Slide
Slide
previous arrow
next arrow

ತುಳಸಿ ಗೌಡ ಮನೆಗೆ ಸಾಲು ಮರದ ತಿಮ್ಮಕ್ಕನ ಭೇಟಿ: ಮಗನ ಮದುವೆಗೆ ಕರೆಯೋಲೆ

300x250 AD

ಅಂಕೋಲಾ: ತನ್ನ ಆತ್ಮೀಯ ಗೆಳತಿ ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಮನೆಗೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಆಗಮಿಸಿ ತಮ್ಮ ಮಗನ ಮದುವೆಯ ಕರೆಯೋಲೆ ನೀಡಿ ಆಹ್ವಾನಿಸಿದರು.
ಸಾಲುಮರದ ತಿಮ್ಮಕ್ಕ ತುಳಸಜ್ಜಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತುಳಸಿ ಗೌಡರನ್ನು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಕೆಲ ಕಾಲ ತನ್ನ ಆತ್ಮೀಯ ಗೆಳತಿಯ ಜೊತೆ ಕುಶಲೋಪರಿಗಳನ್ನು ಹಂಚಿಕೊಂಡರು. ಸಾಲುಮರದ ತಿಮ್ಮಕ್ಕ ತುಳಸಿ ಗೌಡ ಮನೆಯತ್ತ ಬರುತ್ತಲೇ ತುಳಸಿ ಗೌಡರವರು ಅವರನ್ನು ಆತ್ಮೀಯವಾಗಿ ಕೈಹಿಡಿದು ಮನೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಅಗಸೂರು ಪಂಚಾಯತಿ ಅಧ್ಯಕ್ಷ ರಾಮಚಂದ್ರ ನಾಯಕ, ಸಾಲುಮರದ ತಿಮ್ಮಕ್ಕರ ಪುತ್ರ ಉಮೇಶ ಹಾಗೂ ಊರ ನಾಗರಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top