Slide
Slide
Slide
previous arrow
next arrow

ಅಡಿಕೆ ಕದ್ದು ತಲೆಮರೆಸಿಕೊಂಡಿದ್ದ ನಾಲ್ವರು ಅಂದರ್

300x250 AD

ಶಿರಸಿ: ಅಡಿಕೆಗೊನೆಯನ್ನೇ ಕಳವು ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಶಿರಸಿಯ ಬನವಾಸಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೃಷಿಕ ಅಬ್ದುಲ್ ಕರೀಮ್ ಅವರ ತೋಟದಲ್ಲಿ ಡಿ.21ರಂದು ಯಾರೋ ಕಳ್ಳರು ಮರ ಹತ್ತಿ ಅಡಕೆ ಗೊನೆಗಳನ್ನು ಕದ್ದಿದ್ದರು. ಈ ಕುರಿತಂತೆ ಬನವಾಸಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅಡಕೆ ಕದ್ದಿದ್ದ ನಾಲ್ವರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಭದ್ರಾವತಿಯ ನಿಂಬೆಗೊಂದಿಯ ಅವಿನಾಶ ಮಂಜಪ್ಪ, ನರೇಂದ್ರ ಮಂಜಪ್ಪ, ಸಚಿನ ಶಿವಕುಮಾರ ಹಾಗೂ ಲೋಕೇಶ ಬಂಧಿತರಾಗಿದ್ದಾರೆ. ಸುಮಾರು 36000 ರೂ. ಮೌಲ್ಯದ ಅಡಿಕೆಯನ್ನು ಹಾಗೂ ಅಡಿಕ ಸಾಗಾಟಕ್ಕೆ ಬಳಸಲಾದ ಒಮಿನಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಬನವಾಸಿ ಠಾಣೆ ಪಿಎಸ್‌ಐ ಹಣಮಂತ ಬಿರಾದಾರ ಹಾಗೂ ಅವರ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top