Slide
Slide
Slide
previous arrow
next arrow

ದಾರಿ‌ ತೋರಿಸಲು‌ ಹೋದಾತ ಹೊಳೆ ಪಾಲು: ಪಾಂಡವರ ಹೊಳೆಯಲ್ಲಿ ನಡೆದ ದುರ್ಘಟನೆ

300x250 AD

ಶಿರಸಿ : ತಾಲೂಕಿನ ಪಾಂಡವರ ಹೊಳೆ ಬಳಿ ಪ್ರವಾಸಿಗರಿಗೆ ದಾರಿ ತೋರಿಸಲು ಹೋಗಿದ್ದ ವ್ಯಕ್ತಿಯೋರ್ವ ಹೊಳೆಯಲ್ಲಿ ಜಾರಿಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ.

ಬೆಳ್ಳದ್ದ, ಕಪ್ಪೆಗದ್ದೆಯ ಗುರುಪಾದ ರಾಮಚಂದ್ರ ಹೆಗಡೆ (53) ಎಂಬುವವರೆ ಸಾವು ಕಂಡ ದುರ್ದೈವಿಯಾಗಿದ್ದು, ಇವರು ಪಾಂಡವರ ಹೊಳೆಯನ್ನು ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಗೆ ದಾರಿ ತೋರಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಹೊಳೆಯ ಅಂಚಿನಲ್ಲಿದ್ದ ಕಲ್ಲಿನ ಮೇಲೆ ನಿಂತು ಪಾಂಡವರ ಹೊಳೆಯ ಮಾಹಿತಿಯನ್ನು ನೀಡುತ್ತಿರುವಾಗ ಕಲ್ಲಿನಿಂದ ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

300x250 AD

 ಈ ಕುರಿತು ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಈರಯ್ಯ ತನಿಖೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top